Saturday, July 11, 2009

ಪ್ರೇಮ ನಿವೇದನೆಯ ಪರಿ..

ಕೆಲವು ಹಾಡುಗಳು ಬಹಳ ಆತ್ಮೀಯವಾಗುತ್ತವೆ ನಾನು ಹೇಳಹೊರಟಿರುವುದು ಹಳೆಯ ಹಾಡುಗಳ ಬಗ್ಗೆ... ಇಲ್ಲಿ ವಿಶೇಶವೆಂದರೆ

ನಾಯಕಿಯರು ಮುಂದಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ....ಹೌದು ನಮ್ಮ ಬಹಳಷ್ಟು ನಿರ್ದೇಶಕರು ಹೆಣ್ಣು ಗಂಡಿನಿಂದ
ಚುಡಾಯಿಸುವ ಗೀತೆಗಳನ್ನೇ ಬರೆಸಿದ್ದಾರೆ ಹಾಗೂ ಅದೇ ಸರಿ ಎಂದು ನಂಬಿದ್ದರೂ ಕೂಡ...ಆದರೆ ಮಿಂಚುಳ್ಳಿಯಂತೆ ಈ ಕೆಳಗಿನ
ಗೀತೆಗಳು ಸ್ವಲ್ಪ ಭಿನ್ನ ವಾಗಿವೆ ಈ ಹಾಡುಗಳಲ್ಲಿ ತುಂಟತನವಿದೆ, ಆಹ್ವಾನವಿದೆ..ಆದರೂ ಒಂಥರಾ ಆತ್ಮೀಯತೆ ಇದೆ...

೧) " ಸಿಟ್ಟ್ಯಾಕೋ ಸಿಡಕ್ಯಾಕೋ ನನ್ ಜಾಣ...." ಎಲ್ ಆರ್ ಈಶ್ವರಿ ಹಾಡಿದ ಈ ಹಾಡು ಎಂದಿಗೂ ಹಸಿರಾಗಿದೆ. ನಾಯಕಿ ಇಲ್ಲಿ
ನಾಯಕನಿಗೆ ಮುಕ್ತವಾಗಿ ಆಹ್ವಾನ ನೀಡುತ್ತಾಳೆ... ಒಟ್ಟಾಗಿ ಇರುವ ಎಂದು. ಬಹುಶ ಕನ್ನಡದ ಮೊದಲ bold ಹಾಡು
ಇದು ಆಗಿರಲು ಸಾಕು. ಆದರೆ ನನಗೆ ಈ ಗೀತೆಯ ಬಗ್ಗೆ ಹೆಚ್ಚು ಗೊತ್ತಿಲ್ಲ ಯಾರು ಬರೆದವ್ರು, ಯಾವ ಚಿತ್ರದ್ದು ಇತ್ಯಾದಿ.

೨) "ನಿಲ್ಲಯ್ಯೋ ನಿಲ್ಲೊ ಓ ಕೆಂಚು ಮೀಸ್ಯೋನೆ..." ಮಂಜುಳಾ ಆಗ top ನಲ್ಲಿದ್ದರು... ಬಜಾರಿ ಪಾತ್ರ ಮಾಡುವುದರಲ್ಲಿ
ಎತ್ಟಿದ ಕ್ಯೆ . ನಾಯಕನ ಬೆನ್ನು ಹತ್ತಿ ತನಗೆ ಅವನ ಮೇಲೆ ಮನಸ್ಸಾಗಿರುವದನ್ನು ಹೇಳುತ್ತ ತಾನು ಪಟ್ಟ ಪಾಡು ಹೇಳುತ್ತಾಳೆ..
"ಗುಡ್ಡ ಬೆಟ್ಟ ಹತ್ತಿ ಬಂದೆ ಹಳ್ಳ ಕೊಳ್ಳ ದಾಟಿ ಬಂದೆ " ಉದಯಶಂಕರ ಈ ಹಾಡು ಬರೆದಾಗ ಅವರ ಮನದಲ್ಲಿ ಏನಿತ್ತೋ
ಗೊತ್ತಿಲ್ಲ. ಆದರೆ ಹಾಡು ಅದ್ಬುತ ವಾಗಿ ಮೂಡಿ ಬಂದಿದೆ. "ಬದುಕು ಬಂಗಾರವಾಯಿತು" ನಮ್ಮ ಹುಬ್ಬಳ್ಳಿ ಹಿರಿಯರು ತೆಗೆದ
ಚಿತ್ರ. ರಂಗರಾವ್ ಸಂಗೀತ ಇಂಪಾಗಿತ್ತು.ಜಾನಕಿ ಹಾಡು ಒಂಥರಾ ಟ್ರೆಂಡಸೆಟರ್ ಇದ್ದ ಹಾಗಿತ್ತು..

೩) " ಮುತ್ತು ಮಳೆಗಾಗಿ ಹೊತ್ತು ಕಾದಿದೆ...." ವಾಣಿ ಜಯರಾಂ ಹಾಡಿದ ತುಂಟ ಹಾಡು. ಇಲ್ಲಿ ನಾಯಕಿ ಶಹರದವಳು.
ಅವಳ ಆಹ್ವಾನ ಎಂಥದು ನೋಡ್ರಿ " ಕೆನ್ನೆ ಕೆಂಪಗಾಗಿ ತಂಪು ಕೋರಿದೆ ". ಗೀತಪ್ರಿಯ ಬರೆದ ರಸಿಕ ಗೀತೆ ಇದು.
ವಿಜಯ್ ಭಾಸ್ಕರ ಸಂಗೀತ ಸೊಗಸಾಗಿದೆ. "ಬೆಳುವಲದ ಮಡಿಲಲ್ಲಿ " ಒಂದು ಅಪರೂಪದ ಚಿತ್ರ - black&white-
ಸಿನೇಮಾ.ಹುಬ್ಬಳ್ಳಿ ಹುಡುಗಿ ಶಾಂತಲಾ ದುಂಡುಗಲ್ಲದ ಚಂದ್ರಶೇಖರ(ಆ ಕಾಲದ...!) ಛೇಡಿಸುವ ಈ ಹಾಡು ಸೊಗಸಾಗಿತ್ತು.

೪) " ಏ ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ ದನಿಯಲಿ ವಿನೂತನ ಜೀವ ಭಾವ ನೀ ತಂದೆ "
ಎಂತಹ ಸೊಗಸಾದ ಕಲ್ಪನೆ ನಾಯಕಿಯ ಎದೆಯಲ್ಲಿ ಕೋಗಿಲೆ ಇದೆ ಪ್ರೇಮ ಅದಕೆ ಹೊಸ ಭಾಶೆ ಬರೆದಿದೆ.
ಒಂದು ಸಾಮಾನ್ಯ ಸನ್ನಿವೇಶ ಆದರೇನು ಉದಯ್ ಶಂಕರ್ ಎನ್ನುವ ಮಾಂತ್ರಿಕ ಹೊಸ ದಿಕ್ಕು ತೋರಿಸಿದರು.
ಜಾನಕಿ ಹಾಡಿದ ಒಂದು ಸುಂದರ ಗೀತೆ ಇದು. ರಾಜನ್ ನಾಗೇಂದ್ರ ರ ಸಂಯೋಜನೆಯಲ್ಲಿ ಮೂಡಿದ ಹಾಡು
ಅಜರಾಮರ. ಅಣ್ಣಾವ್ರ ಸಿಡುಕು ಮುಖ , ಲಕ್ಷ್ಮಿಯ "ಅದಾ" ಎರಡರ ಮಿಲಾಪ ಹೇಗಿತ್ತು ಗೊತ್ತಾ?

೫) "ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ..." ಗ್ರಾಮೀಣ ಸೊಗಡಿನ ಚಿತ್ರ "ಪರಸಂಗದ ಗೆಂಡೆತಿಮ್ಮ". ಸನ್ನಿವೇಶ
ನಾಜೂಕಿನದ್ದು. ವಿವಾಹಿತ ಮಹಿಳೆ ಪರಪುರುಷನನ್ನು ಮೋಹಿಸಿರುತ್ತಾಳೆ ಆದರೆ ಹಾಡಿನಲ್ಲಿ ಎಲ್ಲೂ ಅಶ್ಲೀಲತೆ ಇಲ್ಲ
ಇದ್ದದ್ದು ಕಾವ್ಯದ ಕುಸುರಿ ಕೆಲಸ. " ಆಸೆ ಗಂಧ ಹರಡೈತೆ " ಎನ್ನುವ ಸಾಲು ನೀಡುವ ಪುಳಕದ ಮಜಾ ಹೇಗಿದೆ.
ದೊಡ್ದ ರಂಗೇಗೌಡರು ಗ್ರಾಮೀಣ ಹಿನ್ನೆಲೆಯವರು. ತಮ್ಮ ಅನುಭವ ಧಾರೆ ಎರೆದಿದ್ದಾರೆ.
ಜಾನಕಿಯವರೇ ಸ್ವತ ಹೇಳಿದ್ದಾರೆ ಅವರು ಹಾಡಿದ ಉತ್ತಮ ಗೀತೆಗಳಲ್ಲಿ ಇದು ಒಂದು ಎಂದು. ನಿಜವೇ ರೀಟಾ ಅಂಚನ್ ಎಂತಹ
ಸೌಂದರ್ಯವತಿ...ಮಾನು ಅವರ ಕಳ್ಳ ನಗು ನೆನಪಿದೆಯೇ.....?

೬) " ಕಣ್ಣೀನ ಚೂರಿಯಲಿರುವಾ ಮರೆ ಮಾಡಿ ಬೆರಳಲಿ ಕರೆವಾ ...ಇವನ ದಿಗರೇನ ಕುದರಿ ಚದರೇನ...." ಅಪ್ಪಟ ದೇಶಿ ಹಾಡು
ಕಂಚಿನ ಕಂಠದ ಸುಶೀಲಾರ ಈ ಹಾಡು ಅದೆಷ್ಟು ಛಂದ.ಹಳ್ಳೀ ಹೆಣ್ಣಮಗಳು ನಿರ್ಭಿಡೆ ಸ್ವಭಾವದವಳು. ತನಗನಿಸಿದ್ದು ನೇರವಾಗಿ ಹೇಳುವವಳು ಗೆಳೆಯ ಬೇಲಿ ಜಿಗ್ಯಾವ ಅದೂ ಅಕಿಗೆ ಗೊತ್ತು ಆದರೂ ಅವನ ಬಗ್ಗೆ ಕೌತುಕ ಅದ. "ಹತ್ತ್ಯಾನ ಹಾರುವ
ಕುದುರಿ ಹಾರ್ಯಾನ ಹಿತ್ತಲ ಬೇಲಿ ಇವನ ಮ್ಯಾಲ ಕೂತಾವ ಪಿರತಿ ಹಗಲಿ ರಾತ್ರಿ ನನಗಿವನ ಭ್ರಾಂತಿ..." ಒಂಥರಾ ತೆರೆದ ಪುಸ್ತಕ ಅವಳ ಮನಸ್ಸು...ಓದಿದವರಿಗೆ ಮಾತ್ರ ತಿಳೀತದ ಅದರ ಸೊಗಸು...!

6 comments:

  1. sir,

    tuntatana mathu vibinnavagiruva i hadugalu nanagu ishta...

    ReplyDelete
  2. tumba chennagide sir, nivu sangeet priyare irabeku. hadodakke endru barutta hege...

    ReplyDelete
  3. ನಿಮ್ಮ ಬ್ಲಾಗಿಗೆ ಬಹಳ ದಿನಗಳ ನ೦ತರ ಬ೦ದೆ, ಕ್ಷಮೆ ಇರಲಿ. ನೀವು ಹೇಳಿದ ಚಿತ್ರಗಿತೆಗಳಲ್ಲಿ ಕೆಲವು ನನಗೂ ಇಷ್ಟ.

    ReplyDelete
  4. ಶಿವು ನೀವು ಹೇಳೋದು ಖರೆ ತುಂಟತನ ಈ ಹಾಡುಗಳ ಜೀವಾಳ...ಮೆಚ್ಚಿದ್ದಕ್ಕೆ ಧನ್ಯವಾದಗಳು...

    ReplyDelete
  5. ಗೋಪಾಲ್ ನಾ ಹಾಡುವುದೊಂದೇ ರಾಗ ಅದೇ "ಎದ್ದೋಡಿ"

    ReplyDelete
  6. ಪರಾಂಜಪೆ ಅವರಿಗೆ ಸ್ವಾಗತ ಮೆಚ್ಚಿದ್ದಕ್ಕೆ ಧನ್ಯವಾದಗಳು....

    ReplyDelete