Tuesday, April 14, 2009

ಪ್ರಸ್ತುತ

ಸರ್ವಧಾರಿಯ ಪ್ರಮಾದದ ಬೆಂಕಿ ಇನ್ನೂ ಆರಿಲ್ಲ
ವಕ್ಕರಿಸಿದ್ದಾನೆ ಅದಾಗಲೇ ವಿರೋಧಿ...
ತಂದಿದ್ದಾನೆ ಜತೆಯಲ್ಲಿ ಪೆಟಾರಿಯೊಂದ
ತುಂಬಿರಬಹುದು ಅದರಲ್ಲಿ ಬಣ್ಣಬಣ್ಣದ ಕನಸುಗಳ..!
ವಿಕ್ರಯಿಸಲೇ ಬದಂತಿದೆ ನಮ್ಮ ಇರುವನ್ನು..
ಹೇಳಿಕೇಳಿ ರಿಸೆಶನ್ನು.....

ಪ್ರಶ್ನೆಗಳಿವೆ ತುಸು ದ್ವಂದ್ವವೂ ಇದೆ ನನ್ನಲ್ಲಿ
ಫೂತ್ಕರಿಸಲಿದೆಯೇ ಮತ್ತೊಮ್ಮೆ ಕಾಲಸರ್ಪ
ಬೆಳ್ಳಿ ಹಿಮ ಹೊದೆಯಲಿದೆಯೇ ಕೆಂಪು ಚಾದರ
ಮತ್ತೆ ಬಿಸಿನೆತ್ತರು ಸುರಿಯುವುದೆ ತಂಪು ಕಾರಿಡಾರ್ ಗಳಲ್ಲಿ...
ಮತ್ತ್ಯಾರೋ ಕಸಬ್,ದಾರಾಸಿಂಗ ನೆರೆಮನೆಯಿಂದಲೇ
ಹೊರ ಬಂದು ಓಣಿಗೆ ಕೊಳ್ಳಿ ಇಟ್ಟಾನೆಯೇ....

ಉತ್ತರ ಹುಡುಕುತ ನಿಂತಿರುವೆ ನಾನಿಲ್ಲಿ
ಕಣ್ಣೀರು ಬತ್ತಿ ಎದೆ ಒಡೆದವರ ನಡುವಲ್ಲಿ.....!

No comments:

Post a Comment