Thursday, February 16, 2012

ಬೆಳದಿಂಗಳ ನೋಡ.....

ಮತ್ತೊಂದು ಕತಿ ಬರದೇನಿ....
ಈ ಕತಿ ಬರದು ಭಾಳ ದಿನಾ ಆಗಿತ್ತು..ಇದು ಇದರ ಮೊದಲ ಭಾಗ
ಎರಡನೇದಕ್ಕ ನಿರೀಕ್ಷಾ ಮಾಡ್ರಿ..

----------------------------------------------------------------------------------------------

ಕಮಲಾಬಾಯಿ ನಿರಾಳವಾದರು. ಎರಡು ದಿನಗಳಿಂದ ಬಹಳೇ
ತಳಮಳಿಸಿದ್ದರು. ತಾವು ನೋಡಿದ ವಿಷಯ ಮೊದಲು ಯಜಮಾನರಿಗೆ ತಿಳಿಸಿದ್ದರು..ಅವರ
ನೀರಸ ಪ್ರತಿಕ್ರಿಯೆ ಅವರನ್ನು ನಿರುತ್ಸಾಹ ಗೊಳಿಸಿರಲಿಲ್ಲ ತಪ್ಪು ನಡೆಯುತ್ತಿದೆ ಎಂದು ಗೊತ್ತಿದ್ದೂ
ನೋಡುತ್ತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದಲ್ಲ. ಅದರಲ್ಲೂ ತಮ್ಮ ಪ್ರೀತಿಯ
ಮಂಗಲಾಳ ಮಗಳು ತಪ್ಪು ಹಾದಿ ತುಳಿಯುತ್ತಿದ್ದಾಳೆ ಇದರ ಬಗ್ಗೆ ಮಂಗಳಾಳಿಗೆ ಹೇಳಲೇಬೇಕು
ಎಂದು ನಿರ್ಧರಿಸಿದರು.
ಆಗಿದ್ದಿಷ್ಟೆ..ಎರಡು ದಿನದ ಹಿಂದೆ ಮಧ್ಯಾಹ್ನ ಕಮಲಾಬಾಯಿ
ಅಪಾರ್ಟಮೆಂಟಿನ ಮುಂದಿನ ಲಾನ್ ನಲ್ಲಿಕುಳಿತಾಗ ಮುಖ್ಯರಸ್ತೆಯ ತಿರುವಿಗೆ ಬೈಕ್ ನಿಂತ ಶಬ್ದ
ತಲೆ ಎತ್ತಿ ನೋಡಿದರೆ ಕಂಡಿದ್ದು-ಕುಳಿತವನನ್ನು ಅಪ್ಪಿ ಹಿಡಿದು ಕುಳಿತಿದ್ದ ಯುವತಿ ಮನಸ್ಸಿಲ್ಲದೇ
ಕೆಳಗಿಳಿದಂತಿತ್ತು.ಬೈಕ್ ಸವಾರ ನೀಡಿದ್ ಗಾಳಿಮುತ್ತಿಗೆ ಇವಳೂ ತನ್ನ ತುಟಿಗೆ ಕೈ ಸೋಕಿಸಿ
'ಉಫ್' ಎಂದು ಊದಿದಳು. ತಾನಿರುವುದು ರಸ್ತೆಯಲ್ಲಿ ಎಂಬ ಅರಿವೂ ಅವಳಿಗೆ ಇರಲಿಲ್ಲ.
ಕುಣಿಯುತ್ತಲೇ ಅಪಾರ್ಟಮೆಂಟು ಪ್ರವೇಶಿಸಿದವಳು ಮಂಗಲಾಳ ಮಗಳು ರಶ್ಮಿ ಎಂಬುದು ಅರಿವಾಗಿ
ಕಮಲಾಬಾಯಿ ಬೇಗುದಿಗೊಂಡರು.
ಕಮಲಾಬಾಯಿ ಅವರದು ಸಂತೃಪ್ತ ಕುಟುಂಬ, ಎರಡು ಬೆಡ್ ರೂಮಿನ ಫ್ಲಾಟ, ಮಗಳು ಬೆಂಗಳೂರಿನಲ್ಲಿ
ತನ್ನ ಸಂಸಾರದ ಜೊತೆ ಇದ್ದಾಳೆ,ಮಗ ಅಮೇರಿಕ ಸೇರಿಕೊಂಡಿದ್ದಾನೆ. ದಿನದ ಬಹುಪಾಲು ವೇಳೆ
ಕಮಲಾಬಾಯಿ ಜಪತಪ ಗಳಲ್ಲಿ ಕಳೆಯುತ್ತಾರೆ.ದೇವರ ಪೂಜೆ ಆಗದ ಹೊರತು ಒಂದು ಹನಿ ನೀರು
ಸಹ ಅವರು ಕುಡಿಯುತ್ತಿರಲಿಲ್ಲ. ರಾಮರಾಯರಿಗೆ, ಅಂದರೆ ಕಮಲಾಬಾಯಿಯವರ ಯಜಮಾನರಿಗೆ
ಈ ಅತಿ ಮಡಿವಂತಿಕೆ ಸೇರುತ್ತಿರಲಿಲ್ಲ. ಆಗಾಗ ಅವರಿಬ್ಬರ ನಡುವೆ ಈ ಬಗ್ಗೆ ವಾದ ಆಗುತ್ತಿತ್ತು.
ಇವರ ಫ್ಲಾಟ್ ಎದುರಿನದೇ ಮಂಗಲಾದ್ದು. ಗಂಡ ಶ್ರೀಪತಿ ಬ್ಯಾಂಕನಲ್ಲಿ ಆಫೀಸರ್ ಒಬ್ಬಳೇ ಮಗಳು
ರಶ್ಮಿಇಂಜಿನೀಯರಿಂಗ್ ಮೊದಲ ವರ್ಷದಲ್ಲಿದ್ದಾಳೆ ಮಂಗಲಾಳಿಗೆ ತಾಯಿ ಇಲ್ಲ ಕಮಲಾಬಾಯಿ ಅವರ
ಜೊತೆಗಿನ ಒಡನಾಟ ಆ ಕೊರತೆ ನೀಗಿಸಿದೆ. ಅವರಿಬ್ಬರು ಗುಡಿ, ಕಾಯಿಪಲ್ಯ ತರಲು ಜೊತೆಗೆ ಸುತ್ತಾಡುತ್ತಿದ್ದರು.
ಮಂಗಲಾ ತನಗೆ ತಿಳಿಯದ ಅನೇಕ ವಿಷಯಗಳ ಬಗ್ಗೆ ಕಮಲಾರಲ್ಲಿ ಹೇಳಿಕೊಳ್ಳುವುದಿತ್ತು. ತಮಗೆ
ತಿಳಿದ ಸಲಹೆ ಕೊಡುತ್ತಿದ್ದರು. ಶ್ರೀಪತಿಗೂ ಇವರ ಮೇಲೆ ಗೌರವ ಇತ್ತು.
----------------------------------------------------------------------------
ಮಂಗಲಾಳಿಗೆ ಅವಳ ಮಗಳು ಮಾಡಿದ ಕಿತಾಪತಿ ಬಗ್ಗೆ ಹೇಗೆ ಹೇಳುವುದು ಈ ಗೊಂದಲದಲ್ಲಿದ್ದರು.
ಬಾರಿ ಬಾರಿ ರಶ್ಮಿಯ ಗಾಳಿ ಚುಂಬನದ ದೃಶ್ಯ ತೇಲಿಬರುತ್ತಿತ್ತು.ಅವಳಿಗೆ ಅಚ್ಛಾ ಜಾಸ್ತಿ ಆಗೇದ ಸಲಿಗೆಯ
ದುರುಪಯೋಗ ತೆಗೆದುಕೊಳ್ಳುತ್ತಿದ್ದಾಳೆ... ಒಂದು ಮಧ್ಯಾಹ್ನ ಮಂಗಲಾಳಿಗೆ ಎಲ್ಲ ತಿಳಿಸಿದರು. ರಾದ್ಧಾಂತ
ಆಗುವ ಮೊದಲೇ ತಿದ್ದಿಕೊಳ್ಳಲು ತಿಳಿಸಿದರು. ರಶ್ಮಿಯ ನಡುವಳಿಕೆ ತಿದ್ದುವ ಕುರಿತು ತಮ್ಮ ಅರಿವಿಗೆ ಬಂದ
ಸೂಚನೆ ಕೊಟ್ಟರು.
ರಾಮರಾಯರಿಗೆ ಹೆಂಡತಿಯ ಕಾರಭಾರ ಸೇರಿರಲಿಲ್ಲ. ಹಾಗಂತ ನೇರವಾಗಿ ಹೇಳಿದರು.ಕಮಲಾರದ್ದು
ಒಂದೇ ವಾದ ತಮ್ಮ ಮಾತಿನಿಂದ ಮಂಗಲಾ ಶ್ರೀಪತಿ ಕಣ್ಣು ತೆರೆಯಲಿ, ರಶ್ಮಿ ಎಡುವುವ ಮೊದಲೇ
ಸುಧಾರಿಸಲಿ ಅಂತ. ದಿನವೂ ಭೇಟಿ ಕೊಡುವ ಮಂಗಲಾ ಎರಡು ದಿನ ವಾದರೂ ಬಂದಿರಲಿಲ್ಲ.ತಾಳಲಾರದೆ
ಅವರ ಮನೆ ಬಗಿಲು ಬಡಿದಾಗ ಎದಿರಾದದ್ದು ಮಂಗಲಾಳ ಸಪ್ಪೆ ಮುಖ.ಕೋಣೆ ಸೇರಿದ ರಶ್ಮಿ ಹಟ ಹಿಡಿದಿದ್ದಾಳೆ
ಎರಡು ದಿನದಿಂದ ಸರಿಯಾಗಿ ಮಾತೂ ಆಡುತ್ತಿಲ್ಲ ಊತಾನೂ ಮಾಡುತ್ತಿಲ್ಲ ..ಗಂಡ ಅವಳಿಗೆ ಹೊಡೆಯಲು
ಹೋಗಿದ್ದು ತಾನು ಬಿಡಿಸಿಕೊಂಡದ್ದು ಎಲ್ಲ ಮಂಗಲಾ ಹೇಳಿಕೊಂಡಳು.ರಜೆ ಹಾಕಿದ್ದ ಶ್ರೀಪತಿನೂ ಮಾತಿಗೆ ಸಿಕ್ಕ.
ಸಕಾಲದಲ್ಲಿ ಎಚ್ಚರಿಸಿದ್ದಕ್ಕೆ ಧನ್ಯವಾದ ಹೇಳಿದ. ಸಮಸ್ಯೆಗೆ ಪರಿಹಾರ ವಿಚಾರಾನೂ ಮುಂದಿಟ್ಟ.
----------------------------------------------------------------------------------
ಶ್ರೀಪತಿ ಗೊಂದಲದಲ್ಲಿದ್ದ.ಪಿಯುಸಿಯಲ್ಲಿ ಚೆನ್ನಾಗಿ ಮಾರ್ಕು ತೆಗೆದ ರಶ್ಮಿ ದೂರ ಕಳಿಸುವುದು ಬೇಡವಾಗಿ
ಹುಬ್ಬಳ್ಳಿಯಲ್ಲಿಯೇ ಪೇಮೆಂಟ್ ಸೀಟು ಕೊದಿಸಿದ್ದ.ಮಗಳು ಹೀಗೆ ಮಾಡಿದ್ದು ಅವನಿಗೂ ಅಸಮಾಧಾನವಾಗಿತ್ತು.
ತನ್ನ ಕೆಲಸದ ಒತ್ತಡದಲ್ಲಿ ಅವಳ ಬಗ್ಗೆ ಸರಿಯಾಗಿ ಗಮನ ಹರಿಸಲು ಆಗಿರಲಿಲ್ಲ ಇದು ಅವನಿಗೆ ವೇದ್ಯ ವಿಷಯ.
ಆದರೆ ಅದಕ್ಕೆ ಈ ಪರಿ ದಂಡ ಕೊಡಬೇಕಾಗುತ್ತದೆ ಇದು ನೋವಿನ ಸಂಗತಿ.ಬೆಳೆದು ನಿಂತ ಮಗಳ ಮೇಲೆ
ಕೂಗಾಡುವುದು,ಹೊಡೆಯುವುದು ಅವನಿಗೂ ಬೇಸರ ತಂದಿತ್ತು. ಹುದುಗನ ಬಗ್ಗೆ ವಿಚಾರಿಸಿದ್ದ ನಮ್ಮ ಜಾತಿಯವ
ಅಲ್ಲ, ಚಿಕ್ಕಮಗಳೂರು ಕಡೆಯವ.ತಮ್ಮಿಬ್ಬರ ನಡುವೆ ಇರೋದು ಸ್ನೇಹ ಮಾತ್ರ ರಶ್ಮಿ ಗೋಗರೆದಿದ್ದಳು.
ಕಮಲಾಬಾಯಿ ಕೊಟ್ಟ ಚಿತ್ರಣವೇ ಬೇರೆ ..ಪಾಪ ಕಳಕಳಿ ಇದೆಅವರಿಗೆ ಈಗಿನ ದಿನಗಳಲ್ಲಿ ಇಂಥಾವರು ಸಿಗೋದು
ಅಪರೂಪ. ಅದಕ್ಕೇ ಮನೆಗೊಂದು ಹಿರಿತಲೆ ಇರಬೇಕೆನ್ನುವುದು..ಅವರೇನೋ ಸರಿ ಆದರೆ ಅವರ ಯಜಮಾನರು
ಎಂಥಾ ವಿಚಿತ್ರ ಹಿರಿಯರು ಎಂದು ಗೌರವಿಸಿ ಸಲಹೆ ಕೇಳಿದರೆ ಕಡ್ಡಿತುಂಡು ಮಾಡುವಂತಿತ್ತು ಅವರ ವರ್ತನೆ..!
ಇದರಲ್ಲಿ ತಲೆ ಹಾಕುವುದಿಲ್ಲ ಎಂದು ನೇರವಾಗಿ ಹೇಳಿದರಲ್ಲ ಮಾರಾಯ. ಕಮಲಾಬಾಯಿ ರಶ್ಮಿಗೆ ಗಂಡು ನೋಡಲು
ಸಲಹೆ ಕೊಟ್ಟಿದ್ದಾರೆ ಇಷ್ಟು ಬೇಗ ಎಂಥಾ ಮದುವೆ ..ಗೊಂದಲದಲ್ಲಿದ್ದ. ಬಗೆಹರಿಯದ ಸಮಸ್ಯೆ ಇದು.
ಕಮಲಾಬಾಯಿ ಖುಶಿಯಲ್ಲಿದ್ದರು.ಮಂಗಲಾ-ಶ್ರೀಪತಿಗೆ ತನ್ನ ಉಪದೇಶ ಪಟಾಯಿಸಿದೆ ಅಂತ. ಮುಂದಿನ ಕೆಲ
ಅನಿರೀಕ್ಷಿತ ಘಟನೆಗಳು ಮಾತ್ರ ಅವರ ನಂಬಿಕೆಯನ್ನೇ ಅಲ್ಲಾಡಿಸಿದವು.....

5 comments:

  1. ಸರ್.....ಚೆನ್ನಾಗಿದೆ ....'ಧಾರವಾಹಿ' ತರ interesting ಅನಿಸಿದಾಗ ನಿಲ್ಲಿಸಿಬಿಟ್ರಲ್ಲ ಸರ್....ಮುಂದಿನ ಭಾಗಕ್ಕಾಗಿ ಕಾಯ್ತಾ ಇದ್ದೀನಿ....

    ReplyDelete
    Replies
    1. ಇಲ್ಲ ಬೇಕಂತ ನಿಲ್ಲಿಸಿಲ್ಲ ಟೈಪ್ ಹೊಡದು ಸುಸ್ತಾತು..ಅನಿಸಿಕೆಗೆ ಧನ್ಯೊಸ್ಮಿ

      Delete
  2. ಸರ್,
    ತುಂಬಾ ಚೆನ್ನಾಗಿದೆ ಕತೆ...ಮುಂದುವರಿಸಿ ಸರ್...

    ReplyDelete
    Replies
    1. ಖಂಡಿತ ಶಿವು ಸರ್ ಅನಿಸಿಕೆಗೆ ಧನ್ಯವಾದಗಳು

      Delete