Tuesday, September 30, 2014

ದುಃಖ ಬಂದಾಗ..



ದುಃಖ ಇದ್ದೀದ್ದೇ ಅದು ಹೇಗಿದ್ದರೂ ಬರುವುದೇ..ಅದಕೆ ಹೆದರಿ ಮುಂಬಾಗಿಲ
ಮುಚ್ಚಿಕೊಂಡರೆ ಹಿತ್ತಲಬಾಗಿಲಿಂದ ಒಳಬಂದೀತು..ಅದು ಸರ್ವರೂಪಿ ಕಿಟಕಿಯ ಸಂದಿಯಿಂದಲೋ
ಬಾಗಿಲ ಮರೆಯಿಂದಲೋ ಬೆಳಕಿಂಡಿಯ ಮೂಲಕವೋ ಅದು ಒಳಗೆ ಬಂದೇ ಬರುವುದು..
ಹೀಗೆ ಮಾಡಿದ್ರೆ ಹೇಗೆ ಅದು ಬಾಗಿಲ ಹೊರಗೆ ನಿಂದಾಗ ಬಾಗಿಲ ತೆರೆದು ಒಳಗೆ ಕರೆಯುವುದು..
ಆರಾಮ ಕುರ್ಚಿಯಲ್ಲಿ ಅದನು ಕೂಡಿಸಿ ಚಹಾ ,ಕಾಫಿ ಕೂಲ್ ಡ್ರಿಂಕ್ ಕೇಳುವುದು ಉಪಚರಿಸುವುದು..
ನಮ್ಮ ಸೋಪಸ್ಕಾರಕ್ಕೆ ಅದು ಅಷ್ಟು ಸುಲಭವಾಗಿ ಬಗ್ಗದು ಅದು ಬಹು ಚಾಲಾಕಿ..ಅದರದು ಹದ್ದಿನಕಣ್ಣು..
ಮನೆಯ ಟಿವಿ, ಫ್ರಿಜ್ಜು, ವಾಶಿಂಗಮಶೀನಿನ ಮೇಲೆ ಕಣ್ಣು ಹಾಕಬಹುದು..ತುಂಬಬೇಕಾದ ಕಂತುಗಳ ರಾಶಿ ರಾಚಬಹುದು ಖಕೆ
ಮನೆ ಜಂತಿ ನೋಡುತ್ತ ತುಂಬಬೇಕಾಗಿರುವ ಇಎಮ್ಐ ನೆನಪುಮಾಡಿಕೊಡಬಹುದದು..ಅದರದೋ ನಿರಂತರ ಹಸಿವು
ನಿಮ್ಮ ಮನೆಯಲ್ಲಿ ಸಮಾಧಾನದ ಲವಲೇಶವೂ ಅದಕೆ ಕಂಡೀತೋ..ಅದು ಅದ ಆಪೋಶನ ತಗೊಂಡು ಓಬ್ ಅಂದೀತು..
ಹಾಗೆಯೇ ನಿಮ್ಮೊಳಗನ್ನು ಬಗೆದು ಬತ್ತಲಾಗಿಸುವ ಕಲೆಯೂ ಅದಕಿದೆ..ಅದರ ಈ ಆಟಕೆ ನೀವು ಸೋತು ಬಳಲಿದಿರೋ
ಮುಗೀತು ಅನಾಮತ್ತಾಗಿ ನಿಮ್ಮನ್ನೇ ನುಂಗಿ ಹಾಕೀತು..ಬದಲು ಅದಕೆ ಉಪಚರಿಸಿಯಾದ ಮೇಲೆ ಅದರ ಬಗ್ಗೆ ಆತ್ಮೀಯವಾಗಿ ಮಾತಾಡಿರಿ..
ಮಳೆ ಬೆಳೆ ಹೇಗೆ ವಿಚಾರಿಸಿರಿ,ಅದನೊಮ್ಮೆ ನಯವಾಗಿ ನೇವರಿಸಿ ನೋಡಿ..ಅದು ಕರಗಬಹುದು ಸೋಲಬಹುದು ಬಂದದಾರಿಗೆ ಸುಂಕವಿಲ್ಲ
ಎಂದು ಮರಳಬಹುದು..ಎಲ್ಲ ಗೆದ್ದೆ ಎಂಬ ಭ್ರಮೆ ಅದಕೆ ಗೊತ್ತಿಲ್ಲ ನಿಮ್ಮ ಕಣ್ಣಪಾಪೆಗಳ ಹಿಂದೊಂದು ಕನಸಿದೆ..ಅಲ್ಲಿ ನಿಮ್ಮ ಸುಖ ಅವಿತಿದೆ ಅಂತ..
ಈಗ ಅದು ಬಂದರೆ ಹೀಗೆ ಮಾಡೋಣ..ಇದೊಂದಾಟವ ಆಡಿಯೇ ಬಿಡೋಣ..!!!!!

(ಸಂದೀಪ್ ಖರೆ ಬರೆದ ಮರಾಠಿ ಕವಿತೆಯೊಂದರ ಸಾರಾಂಶವಿದು..ಹೇಗಿದೆ?)


3 comments:

  1. You are appearing after a long time. But you have brought a beautiful pearl from the Marathi literature. Thanks a lot. The Original poem given side by side would have been better. Please give us many more pearls!

    ReplyDelete
  2. This comment has been removed by the author.

    ReplyDelete
  3. ಮನೋಧೈರ್ಯ ತುಂಬುವ ಬರಹವಿದು.
    ಸಂದೀಪ್ ಸಾರ್ ಅವರ ಬಗ್ಗೆ ತಿಳಿಸಿದ್ದು ನಮಗೆ ಖುಷಿಯಾಯಿತು.
    ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ದೊರೆಯಿತು:

    http://en.m.wikipedia.org/wiki/Sandeep_Khare

    ReplyDelete