Tuesday, April 26, 2011

ಯೇ ರಾತ್ ಭೀಗಿ ಭೀಗಿ..












ಹಿಂದಿನ ಸಂಚಿಕೆಯಲ್ಲಿ ಸಂಜೆಯ ಬಗ್ಗೆ ಬರೆದಿದ್ದೆ. ಈಗ ಅದರ ನಂತರದ ಅಂದರೆ ರಾತ್ರಿ ಬಗ್ಗೆ..
ರಾತ್ರಿ, ನಿಶೆ,ಶಬ್,ರಾತ್  ಹೀಗೆ ನೂರಾರು ಹೆಸರು.ಭಾವಗಳು ಸ್ಫುರಿಸುವ ವೇಳೆ ಅದು.
ನಮ್ಮ ಭಾಗ ಅಂದರೆ ಭೂಗೋಲದ ಈ ಭಾಗದಲ್ಲಿ ರಾತ್ರಿಯಾದಾಗ ಬೇರೆಡೆ ಹಗಲಾಗಿರುತ್ತದೆ.
ಅದು ಸ್ವಾಭಾವಿಕ ಬಿಡಿ. ರಾತ್ರಿ ಅನೇಕ ಸಂಗತಿಗಳನ್ನು,ನೆನಪುಗಳನ್ನು ಹಾಗೆಯೇ ನೋವುಗಳನ್ನು
ತೆರೆದಿಡುತ್ತದೆ. ನಾವು ಮಲಗಿದ ವೇಳೆ ನಮ್ಮ ಮನಸ್ಸು ಎಚ್ಚರವಾಗಿರುತ್ತದೆ..ಒಂಥರ ಸುಶುಪ್ತ
ಸ್ಥಿತಿಯಲ್ಲಿ ನಾವಿರುತ್ತೇವೆ.ನಿದ್ರೆ ಇದು ಅತಿ ಅವಶ್ಯಕ. ಹಗಲಿಡೀ ದಣಿದ ದೇಹ ವಿರಮಿಸುವುದು ಈ
ನಿದ್ದೆಯಲ್ಲಿಯೇ. ನಿದ್ದೆ ಮಾಡಿ ಎದ್ದಾಗ ದೇಹದ ಚೈತನ್ಯವೇ ಬೇರೆ.ಇರಲಿ .ರಾತ್ರಿ ಬಗ್ಗೆ ಅನೇಕ
ಹಾಡುಗಳಿವೆ. ಸುಖ ,ದುಃಖ,ಮಿಲನ, ವಿರಹ ಎಲ್ಲವುಗಳ ಭಾವವೇ ಈ ರಾತ್ರಿ.

ಕಿಶೋರ್ ನ ಹಾಡು ನೆನಪಿದೆಯೇ..
"ಆಯೇ ತುಮ್ ಯಾದ್ ಮುಝೆ.." ಮುಂದುವರೆಸುತ್ತ" ಜಬ್ ಮೈ ರಾತೊಂಮೆ ತಾರೆ ಗಿನತಾ ಹುಂ
ಔರ ತೇರಿ ಕದಮೊಂಕಿ ಆಹಟ್ ಸುನತಾ ಹುಂ,..."
ಎಷ್ಟು ಸುಂದರ ಕಲ್ಪನೆ ಇದೆ. ತಾರೆ ಎಣಿಸುವದು
ಅಂದರೆ ಅದು ಮುಗಿಯದ ಕೆಲಸ.ರಾತ್ರಿಇಡೀ ಜಾಗರಣೆಮಾಡಿ ಅವಳ ಹೆಜ್ಜೆ ಸಪ್ಪಳಕ್ಕೆ ಹಾತೊರೆಯುವ
ಮನ.
ಹೇಮಂತ್ ದಾನ ಶೀತಲ ದನಿ. ರಾತ್ರಿಯ ನೀರವತೆಯನ್ನು ಭೇದಿಸುತ್ತದೆ. ಎದೆ ಹಿಂಡುತ್ತದೆ.
"ತುಮ್ ಪುಕಾರಲೋ...ರಾತ್ ಬೇಕರಾರಿಸಿ ಬೇಕರಾರ್ ಹೈ ತುಮಾಃರಾ ಇಂತಜಾರ್ ಹೈ...".
ರಫಿಯ ನೋವುತುಂಬಿದ ದನಿ. ಈ ನಿಶೆಯ ನೋವು ಮತ್ತಷ್ಟು ಹೆಚ್ಚಿಸುತ್ತದೆ...
"ಸುಹಾನಿ ರಾತ್ ಢಲ್ ಚುಕಿ ನಾ ಜಾನೆ ತುಮ್ ಕಬ್ ಆವೋಗೆ...."
" ದಿನ್ ಢಲ್ ಜಾಯೆ ಹಾಯೆ ರಾತ್ ನ ಜಾಯೆ ತೂ ತೋ ನ ಆಯೆ ತೇರಿ ಯಾದ್ ಸತಾಯೇ..."
ಮಹೇಂದ್ರ ಕಪೂರ್ ನ
"ಯೇ ಹವಾ ಯೇ ಫಿಜಾ ಹೈ ಉದಾಸ್ ಜೈಸೆ ಮೇರಾ ದಿಲ್ ಆಭಿಜಾ ಆಭಿಜಾ.." ಅವನ ದನಿಯ
ನೋವಿಗೆ ಯಾರ ಹೃದಯವೂ ಕರಗದೇ ಇರಲಾರದೇನೋ...!
ವಿರಹ ಅಥವಾ ಬೆಂಕಿ ಸಮಾನವಾಗಿದೆ. ಆ ಕಡೆಯೂ ಬೇಗೆ ಇದೆ.ಅನೇಕ ಯುಗಳ ಗೀತೆಗಳಿವೆ
"ಯಾದ್ ಮೆ ತೇರೆ ಜಾಗ್ ಕೆ ಹಮ್ ರಾತಭರ್ ಕರವಟೆ ಬದಲ್ ತೆ ಹೈ..."
"ಘಬರಾಯೆ ಹಾಯೆ ರೆ ದಿಲ್ ಸಪನೊಂಮೆ ಆಕೆ ಕಭಿಮಿಲ್..."

ಮೇಲಿನ ಭಾವ ಬರೀ ನೋವು ಹೇಳಿದವು. ರಾತ್ರಿಯಲ್ಲಿ ಮಾತ್ರ ಯಾಕೆ ಹೀಗೆ ಹಗಲಿನಲ್ಲಿ ನೆನಪು
ಬರಬಾರದೇಕೆ . ಬಹುಷಃ ರಾತ್ರಿಯಲ್ಲಿ ನಮ್ಮತನಕ್ಕೆ ನಾವು ಮುಖಾಮುಖಿಯಾಗುತ್ತೇವೇನೋ
ದಿನದ ಜಂಜಡಗಳ ಶ್ರಮ ಈ ರಾತ್ರಿಯಲ್ಲಿ ಬದಿಗೊತ್ತಿ ಪ್ರಿಯತಮೆ/ಪ್ರಿಯತಮನನ್ನು
ನೆನೆಯುತ್ತ ಹಾಡು ಗುಣುಗುಣಿಸುವುದು ಸಾಮಾನ್ಯ ಪ್ರಕ್ರಿಯೆ. ಅದು ಬರೀ ನೋವಿನ ಹಾಡು
ಆಗಿರಬೇಕು ಎಂದೇನಿಲ್ಲ. ರಾತ್ರಿಗೆ ಅದರದೇ ಆದ ಗಂಧವಿದೆ. ಅಲ್ಲಿಯ ತಂಗಾಳಿ,ಆ ಕಂಪು
ಹೂವಾಗಲು ಚಡಪಡಿಸುವ ಮೊಗ್ಗು,ನಭದಲ್ಲಿ ಹರಡಿರುವ ತಾರೆ/ಚಂದ್ರ..ಹೀಗೆ ರಾತ್ರಿ ಅದರದೇ
ಆದ ಚಿತ್ರ ನಿರ್ಮಿಸುತ್ತದೆ. ರಾತ್ರಿಯ ಸೌಂದರ್ಯ ಹೊಗಳಿ ಅನೇಕ ಹಾಡಿವೆ--

ರಫಿಯ "ಖೋಯಾ ಖೋಯಾ ಚಾಂದ್ ಖುಲಾ ಆಸಮಾನ..." ಈ ಹಾಡಿನ ಚಿತ್ರಿಕರಣ ರಾತ್ರಿಯಲ್ಲಿ
ಆಗಿತ್ತು. ಅಮಲೇರಿದವನಂತೆ ದೇವ್ ಆನಂದ್ ಓಡಾಡುವ ಚಂದ ಏನು ಹೇಳಲಿ..
 
ರಫಿದೆ ಇನ್ನೊಂದು ಹಾಡಿದೆ.."ಇತನಿ ಹಸೀನ್ ಇತನಿ ಜವಾಂ ರಾತ್ ಕ್ಯಾ ಕರೆ.. ಜಾಗೆ ಹೈ ಕುಛ
ಅಜೀಬ್ ಸಿ ಜಜಬಾತ್ ಕ್ಯಾ ಕರೇ..." ಅವನ ಈ ಹಾಡಿನಲ್ಲಿ ಸಕ್ಕರೆಯ ಮಧುರತೆ ಇದೆ.

"ಜಬ್ ಜಾಗ್ ಉಠೆ ಅರಮಾನ್ ತೋ ಕೈಸೆ ನಿಂದ್ ಆಯೇ.." ಹೇಮಂತ್ ದಾನ ರೇಶಿಮೆ ಕಂಠದ
ಸೊಬಗು ಅದೆಷ್ಟು ಚೆಂದ.

ಇನ್ನು ರಾತ್ರಿ ಬರೀ ನೋವು ಅಥವಾ ಸೌಂದರ್ಯವಲ್ಲ. ಅದು ಮಿಲನ ಮಹೋತ್ಸವದ ಕ್ಷಣ ಕೂಡ.
ಪ್ರೀತಿಯ ಎರಡು ಹೃದಯಗಳು ದೇಹಗಳು ಮಿಲನಗೊಳ್ಳುವ ಆ ದಿವ್ಯಗಳಿಗೆ. ರಾತ್ರಿ ಸಮ್ಮೋಹನ
ಗೊಳಿಸುತ್ತದೆ. ತನ್ನ ಪ್ರಶಾಂತತೆಯ ತಂಪು ಪಸರಿಸಿ ಪ್ರೇಮಿಗಳ ಮಿಲನಕ್ಕೆ ಇಂಬು ಗೊಡುತ್ತದೆ.

"ದೋ ಸಿತಾರೊಂಕಾ ಜಮೀನ್ ಪರ್ ಹೈ ಮಿಲನ್ ಆಜ್ ಕಿ ರಾತ್ " ಈ ಹಾಡು ಸದಾಅಮರ.
ರಫಿ ಲತಾ ನೌಶಾದ್ ಶಕೀಲ್ ರ ಸಂಗಮದ್ದು.

"ಫಿರ್ ಛೇಡಿ ರಾತ್ ಬಾತ್ ಫೂಲೋಂಕಿ ರಾತ್ ಹೈ ಬಾರಾತ್ ಫೂಲೋಂಕಿ.." ಮಕದುಮ್ ಮೊಯಿನುದ್ದೀನ್
ಬರೆದ ಗಜಲಿದು.

"ಆಜ್ ಕಿ ರಾತ್ ಪಿಯಾ ದಿಲ ನ ತೋಡೋ ಮನ್ ಕಿ ಬಾತ್ ಪಿಯಾ ಮಾನಲೋ.." ಲತಾಳ ರೇಶಿಮೆದನಿಯ
ಆಗ್ರಹ ಗುಂಗು ಹಿಡಿಸುತ್ತದೆ.

"ಮಾಲವೂನ್ ಟಾಕ್ ದೀಪ್ ಚೇತವೂನ ಅಂಗ ಅಂಗ
ರಾಜಸಾ ಕಿತಿ ದಿಸಾನಿ ಲಾಭಲಾ ನಿವಾಂತ ಸಂಗ...."
ಸುರೇಶ್ ಭಟ್ ರ ಈ ಮರಾಠಿ ಗಜಲು. ಅದ ಹಾಡಿದ ಲತಾಳ ಭಾವುಕ ದನಿ.

ಇನ್ನು ಎಷ್ಟೋ ಹಾಡು ನಾ ಮರೆತಿರಬಹುದು. ರಾತ್ರಿಯ ಅನುಭವ ಅದರ ಸವಿ ಅನುಭವಿಸಿಯೇ ತೀರಬೇಕು.
ನಗರದ ಗೌಜುಗದ್ದಲಗಳಲ್ಲಿ ನಾವು ರಾತ್ರಿಯನ್ನು ಹಗಲಗಿಸುತ್ತಿದ್ದೇವೆ. ಬಿಪಿಓ , ಕಾಲ್ಸೆಂಟರು ಹುಟ್ಟಿಕೊಂಡು
ರಾತ್ರಿ ಹಗಲು ಪಲ್ಲಟ ಗೊಂಡಿವೆ. ನಾವು ಹೀಗೆ ರಾತ್ರಿಯನ್ನು ಕಡೆಗಣಿಸಿದರೂ ರಾತ್ರಿ ತನ್ನ ಕಾಯಕ
ಮಾಡುತ್ತಲೇ ಇದೆ. ತಾರೆ ಹೊಳೆಯುತ್ತಿವೆ, ಚಂದ್ರ ನಗುತ್ತಿದ್ದಾನೆ, ಮೊಗ್ಗು ಗಮಿಸುತ್ತಿವೆ, ನಿಶಿಗಂಧ ಪಸರಿಸಿದೆ
ನಾವು ನಿದ್ರೆಯ ಸೋಗಿನಲ್ಲಿದ್ದೇವೆ.ಒಂದರೆ ಕ್ಷಣ ಬನ್ನಿ  ಹೋಗುವ ಹಾಡುವ
"ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡ ಬೇಡ ಗೆಳತಿ..."

Saturday, April 9, 2011

ಅಗಲಿದ ಸಖನಿಗೆ...












ಜೀವನದ ಪಯಣದಲಿ ಸ್ನೇಹ ಅಥವಾ ಗೆಳೆತನ ನನಗೆ ಒದಗಿಬಂದಿದ್ದು ಕ್ವಚಿತ್ತೇ ಸರಿ. ನನ್ನದೇ ವಿಚಿತ್ರ ಸ್ವಭಾವ,
ಸಂಕೋಚ ಇತ್ಯಾದಿ ಸೇರಿ ಭಾಳ ಕಮಿ ಗೆಳೆಯರು ನನಗೆ.ಆದರೆ ಯಾರ ಜೊತೆ ಗೆಳೆತನ ಬೆಳೆಯಿತೋ ಅದು
ಬಿಡಿಸಲಾರದ ಬಂಧವಾಗಿತ್ತು. ನಾನಾಗಲಿ ಅಥವಾ ಗೆಳೆಯನಾಗಲಿ ಹತ್ತಿರ ಇಲ್ಲದಿದ್ದರೂ ಸ್ನೇಹದ ಬೆಸುಗೆ ಸೊಗಸಾಗಿಯೇ ಇತ್ತು. ನಾ ಅದು ಎಂದೂ ಮುರಿಯಲಾರದು ಅಂದುಕೊಂಡಿದ್ದೆ. ಆದರೆ ಅದು ಮುರಿದುಬಿದ್ದಾಗ
ನೋವು ಖಂಡಿತಆಗುತ್ತದೆ. ಹೀಗೆ ನನ್ನ ಗೆಳೆಯನೊಬ್ಬ ಬಂಧತೊರೆದು ಮುಕ್ತನಾಗಿದ್ದಾನೆ. ಅವನ ಸಾವಿಗೆ ನಮ್ಮ
ಸ್ನೇಹ ಮುರಿಯುವ ಶಕ್ತಿ ಬಂತಾದರೂ ಹೇಗೆ?

ರಮೇಶ್ ಪಾಚಲಗ್ ಈ ಹೆಸರಿನ ವ್ಯಕ್ತಿ ಮೊದಲಿಂದಲೂ ಪರಿಚಯದವನಲ್ಲ. ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವೂ ಇತ್ತು. ನಮ್ಮ ಹುಬ್ಬಳ್ಳಿ ಅರ್ಬನ್ ಬ್ಯಾಂಕಿಗೆ ಬಂದ ಹೊಸ ಹುಡುಗರ ದಂಡಿನಲ್ಲಿ ಕೆಂಪಗೆ,
ಇತ್ತು. ನಮ್ಮ ಹುಬ್ಬಳ್ಳಿ ಅರ್ಬನ್ ಬ್ಯಾಂಕಿಗೆ ಬಂದ ಹೊಸ ಹುಡುಗರ ದಂಡಿನಲ್ಲಿ ಕೆಂಪಗೆ, ಟೋಮಾಟೋ ಹಣ್ಣಿನಂತಿರುವ ಹುಡುಗ ಹತ್ತಿರವಾದ. ವಯಸ್ಸಿಗೆ ಹೋಲಿಸಿದರೆ ಸ್ಥೂಲಕಾಯ ಎನ್ನಬಹುದು.
. . ಓದಿದ್ದು ಬಿ ಎಸ್ ಸಿ ಆದರೂ ಆಧ್ಯಾತ್ಮ,ಫಿಲಾಸಫಿ,ಓಷೋ, ವಿವೇಕಾನಂದ
ಓಷೋ, ವಿವೇಕಾನಂದ ಹೀಗೆ ಹತ್ತು ಹಲವು ವಿಷಯದಲ್ಲಿ ಮಾತನಾಡುತ್ತಿದ್ದ.ಅವನ ಜೊತೆ ವಾದ ಚರ್ಚೆ ಮಾಡುವುದು ಒಂಥರಾ ಫಾಯದೆಯ ವಿಚಾರವಾಗಿತ್ತು.
. ನಮಗೆ ತಿಳಿಯದಿದ್ದ ಅನೇಕ ವಿಷಯ ತಿಳಿದುಕೊಳ್ಳಬಹುದಾಗಿತ್ತು. ಹಾಗೆಯೇ
ಎಂದೂ ತನ್ನ ಮಾತೇ ನಡೆಯಬೇಕು ಎಂಬ ಅಹಂ ಅವನಲ್ಲಿರಲಿಲ್ಲ. ನನ್ನ ಅನೇಕ ಖಾಸಗಿ ಸಂಗತಿ ಅವನೊಡನೆ ಚರ್ಚಿಸುತ್ತಿದ್ದೆ. ಸಮಾಧಾನ ಪಡೆಯುತ್ತಿದ್ದೆ. ಅವನ ತಂದೆ ಆಯುರ್ವೇದದ ಪುಣೆಯ ಫಾರ್ಮಸಿ--ಆಯುರ್ವೇದ ಅರ್ಕಶಾಲಾ--ಕೊಪ್ಪಿಕರ್ ರಸ್ತೆಯಲ್ಲಿತ್ತು--ಅಲ್ಲಿ ಕೆಲಸಕ್ಕಿದ್ದರು.ರಮೇಶನಿಗೆ ತಮ್ಮನಿದ್ದ. ಕಿಲ್ಲೆಯಲ್ಲಿ ಹಳೆಯ ಕಾಲದ ಮನೆ. ಬಾದಾಮಿನಗರದಲ್ಲಿ
ರಮೇಶನ ತಂದೆ ಈ ಹಿಂದ ಪ್ಲಾಟ್ ಖರೀದಿಸಿದ್ದು. ಅವರು ಅಲ್ಲಿ ಮನೆ ಕಟ್ಟಿದ್ದು, ಅವನ ಮದುವೆ,ಹಾಗೂ ಮುದ್ದಾದ
ಮಗಳನ್ನೆತ್ತಿಕೊಂಡು ಅವ ತಿರುಗಾಡಿದ್ದು ಎಲ್ಲ ಭಾಳ ವೇಗದಾಗ ಆಗಿ ಹೋದ್ವು. ಅವನ ಮನೆ ಫರ್ನೀಚರ್ ಖರೀದಿ,
ಟಿವಿ ಖರೀದಿ ಹೀಗೆ ನಾ ಹಲವು ಕಾರ್ಯದಲ್ಲಿ ಭಾಗಿಯಾಗಿದ್ದೆ. ಅಂತೆಯೇ ನನ್ನ ಮಗಳ ನಾಮಕರಣ,ಹುಟ್ಟಿದ ಹಬ್ಬ
ಹೀಗೆ ಅವನೂ ನನ್ನ ಸಂತೋಷದಲ್ಲಿ ಭಾಗಿಯಾಗಿದ್ದ.

ಬರೀ ಅವನ ಗುಣಗಾನ ಮಾಡಲಾರೆ.ಸ್ವಲ್ಪ ದುಸ್ಸಾಹಸಿ ಕೂಡ. ವಿಪರೀತ ಬೆವರುತ್ತಿದ್ದ, ಬೈಕ್ ಖರಿದೀಸಿ ಒಂದೆರಡು
ಚಿಕ್ಕ ಅಪಘಾತ ಮಾಡಿದರೂ ಹುಮ್ಮಸ್ಸಿನಿಂದ ಓಡಿಸುತ್ತಿದ್ದ. ಅನೇಕವೇಳೆ ಅವನ ಬೈಕ್ ಹಿಂದೆ ಕುಳಿತಿದ್ದೆ--ಜೀವ ಕೈಯಲ್ಲಿ ಹಿಡಕೊಂಡು. ಒಂಥರಾ ಮೂಡಿ ಮನುಷ್ಯ.ಒಮ್ಮೆಲೆ ಗರಮ್ ಆಗುತ್ತಿದ್ದ ಮರುದಿನ ಸಾರಿ ಕೇಳುತ್ತ ಎಲ್ಲ
ಮರೆಯುತ್ತಿದ್ದ. ನಾ ಬ್ಯಾಂಕ್ ನೌಕರಿ ಬಿಟ್ಟು ಬೆಂಗಳೂರು ಸೇರುವ ವಿಷಯ ಅವನಿಗೆ ಬೇಜಾರು ತಂದಿತ್ತು. ಆದರೂ
ಹೊರಡುವ ದಿನ ಸ್ಟೇಶನ್ನಿಗೆ ಬಂದಿದ್ದ. ಆಮೇಲೂ ಫೋನ್, ಎಸ್ಸೆಮೆಸ್, ಹೀಗೆ ಚಾಲೂ ಇದ್ದವು. ನಡುವೆ ಹುಬ್ಬಳ್ಳಿಗೆ
ಹೋದಾಗ ಭೇಟಿನೂ ಆಗಿತ್ತು.

ಹೋದವರ್ಷವಿಡೀ ಅವನ ಬಗ್ಗೆ ಬೇರೆಬೇರೆಯವರಿಂದ ಥರಥರದ ಸುದ್ದಿ ಕೇಳಿದೆ. ಅವನನ್ನು ಈ ಬಗ್ಗೆ ಕೇಳಬೇಕು
ಸಮಾಧಾನ ಹೇಳಬೇಕು ಇದು ಹಂಬಲವಾಗಿಯೇ ಉಳಿಯಿತು.ವಿಷಯ ತೀರ ವೈಯುಕ್ತಿಕವಾಗಿತ್ತು. ಹೀಗಾಗಿ ಕೆದಕಲು ನನಗೂ ಪೂರ್ತಿ ಮನಸ್ಸಿರಲಿಲ್ಲ.ಒಂದು ವೇಳೆ ನಾ ಚರ್ಚಿಸಿದ್ದಿದ್ದರೆ ಒಳ್ಳೆಯದಿತ್ತೇನೋ ಹೀಗೂ ವಿಚಾರ
ಬಂದಿತ್ತು. ೨೦೧೦ ರ ದೀಪಾವಳಿ---ನರಕ ಚತುರ್ದಶಿ--ದಿನ ಅವನೊಡನೆ ಕೊನೆ ಬಾರಿ ಮಾತಾಡಿದ್ದೆ.
ನಾವು ಕರೆದಾಗ ಕೊಸರಾಡಿ ಕೊಸರಾಡಿ ಬಂದರೂ ಉಪದೇಶ ಹೇಳಿ ಪಾರ್ಟಿಯ ಮಜಾ ಕೆಡಿಸುತ್ತಿದ್ದ ರಮೇಶ
ಕುಡಿತಕ್ಕೆ ದಾಸ ಅಂತ ಹೇಳಲಾಗದಿದ್ದರೂ ವಿಪರೀತ ಕುಡಿಯುತ್ತಿದ್ದನಂತೆ. ಜೀವನ ಅನೇಕ ಸವಾಲು ಒಡ್ಡುತ್ತದೆ
ಹೇಗೆ ಎದುರಿಸಬೇಕು ಹಿಮ್ಮೆಟ್ಟಿಸಬೇಕು ಇದನ್ನು ಉಪದೇಶಿಸುವುದು ಸುಲಭ ಆದರೆ ಸ್ವತಃ ಸವಾಲಿಗೆ ಎದೆಯೊಡ್ಡುವುದು ಹಗುರಲ್ಲ.ರಮೇಶನೂ ಈ ಸ್ಥಿತಿ ಅನುಭವಿಸಿದ್ದ. ಸವಾಲು ಎದುರಿಸದೇ ಕುಗ್ಗಿದ್ದ.
ಅವ ಯಾವಾಗಲೂ ಹೇಳುತ್ತಿದ್ದ ಮಾತು "ಐಕಾವೆ ಜಗಾಚೆ ಕರಾವೆ ಮನಾಚೆ" ಅದನ್ನು ಅವ ಯಾಕೆ ಪಾಲಿಸಿದನೋ
ಗೊತ್ತಾಗಲೇ ಇಲ್ಲ.


ಅಪಘಾತ ನೆವವೇ,  ಸಾವಿಗೆ ನೆನಪೂ ಬೂದಿಮಾಡುವ ಶಕ್ತಿ ಇದೆಯೇ...?