Sunday, February 14, 2010

ಸೋಲಾ ಬರಸ್ ಕಿ ಬಾಲಿ ಉಮರ್ ಕೊ ಸಲಾಮ್ ..


ಇದೇನು ನಾ ಯಯಾತಿತಾದೆನೆ ಅಂದುಕೊಬೇಡಿ ..ಹಾಗೆ ನೋಡಿದ್ರೆ ನಮ್ಮೆಲ್ಲರ ಮನದಲ್ಲಿ
ಆ ಹಂಬಲ ಇದ್ದೇ ಇದೆ ನನ್ನಂತಹ ಭಂಡರು ಅದನ್ನು ನಾಚಿಕೆಯಿಲ್ಲದೆ ಹೊರಹಾಕುತ್ತೇವೆ ಇನ್ನುಳಿದವರು ಆ ಚಪಲಗಳಿಗೆ ವೈರಾಗ್ಯದ
ಮುಸುಕು ಹಾಕಿರುತ್ತಾರೆ.ಸಾಹಿರ್ ಬರೆದ ಹಾಡಿನ ಸಾಲೊಂದಿದೆ " ಯೇ ಭೋಗ್ ಭಿ ಏಕ್ ತಪಸ್ಯಾ ಹೈ ತುಮ್ ತ್ಯಾಗ್ ಕೆ ಮಾರೆ
ಕ್ಯಾ ಜಾನೋ ..." ನಿಜ ಅಲ್ಲವೇ ಭೋಗವನ್ನೇ ಒಂದು ತಪಸ್ಸಾಗಿ ಸಿದ್ಧಿಸಿಕೊಂಡರೆ ಹೇಗೆ.... ಯಯಾತಿ ಮಾಡಿದ್ದು ಇದನ್ನೇ.

ಮೇಲಿನ ಪೀಠಿಕೆ ಯಾಕೆ ಅಂದ್ರೆ ನನ್ನ ಹಾಗೂ ಅಂಜಲಿಯ ದಾಂಪತ್ಯಕ್ಕೀಗ ಹದಿನಾರರ
ಹರೆಯ. ಹದಿನಾರು ಈ ವಯಸ್ಸು ಅನೇಕ ಆಸೆಗಳ ,ಬಣ್ಣಗಳ ಕನಸು ಕೊಡುವ ವಯಸ್ಸು ..ಆ ವಯಸ್ಸು ಮುಟ್ಟಿದವರಿಗೆ.....!
ಕಪ್ಪು ಕೂದಲ ನಡುವೆ ಅಲ್ಲಲ್ಲಿ ಇಣುಕೋ ಬಿಳಿಗೂದಲಿಗೆ ಡೈ ಹಚ್ಚುತ್ತ.., ಬಿಎಮ್ ಟಿಸಿಯಲ್ಲಿ ಜೋತಾಡುತ್ತಲೇ ಈ ಬೆಂಗಳೂರಿನಲ್ಲಿ ಸೈಟಿನ ಬಗ್ಗೆ ಕನಸಿಸುತ್ತ ಅಥವಾ ಮಗಳ ಅಭ್ಯಾಸದ ಬಗ್ಗೆ ತಲೆ ಚಚ್ಚಿಕೊಳ್ಳುತ್ತಲೋ, ಮತ್ತೆ ಎಲ್ಲೋ ನೋಡಿದ
ಬಳೆ ಪ್ಯಾಟರ್ನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ದಿನ ಕಳೆಯೋ ನಮ್ಮಂಥವರಿಗೂ ಹದಿನಾರು ತುಂಬಿದೆ ... ಹೌದು ಈ ನಿಟ್ಟಿನಲ್ಲಿ
ಹೊಸ ಜಾಡು ಹಿಡಿಯಬೇಕಾಗಿದೆ..ಮತ್ತೆ ಬಾಳಿನ ಕ್ಯಾನವಾಸನಲ್ಲಿ ಬಣ್ಣ ತುಂಬಬೇಕಾಗಿದೆ.... ಈ ಹದಿನಾರರ ಹರೆಯಕ್ಕೆ
ಹೊಸಾ ಅರ್ಥ ಕೊಡಬೇಕಾಗಿದೆ. ಸಿಟ್ಟು ಸೆಡವು ಮೂಲೆಯ ಟ್ರಂಕಿನಲ್ಲಿ ಮುಚ್ಚಿಟ್ಟು ಮನೆ ಬಾಗಿಲಿಗೆ ಹೊಸ ಆಸೆಗಳ ತೋರಣ
ಕಟ್ಟುವುದಿದೆ. ಎಷ್ಟೊಂದು ಕೆಲಸಗಳಿವೆ.....
ಜಗಜಿತ್ ಸಿಂಗ್- ಚಿತ್ರಾ ಸಿಂಗ್ ಹಾಡಿದ ಗಜಲಿನ ಸಾಲು ಹೀಗಿದೆ....

उस मॊड से शुरू करॆ फिर से ए जिंदगि..
हर शय जहां हसीन थि हम तुम थे अजनबि...

ನಿಮ್ಮ ಹಾರೈಕೆ ಇದ್ದೇ ಇದೆ ಅಲ್ಲವೇ....
೧೫/೦೨/೨೦೧೦....

Monday, February 8, 2010

ಮತ್ತೊಂದಿಷ್ಟು ಪಂಚಕಗಳು...

೭) ಪೇಟೆ ಹೊತ್ತಿ ಉರೀತಾದೆ ಕೇಳಿದ್ರಾ
ಗೋಣಿ ತುಂಬ ದುಡ್ಡೊಯ್ದು ಕ್ಯಾರಿಯಲ್ಲಿ
ದಿನಸಿ ತಂದವ್ರ ಪಾಡು...
ಚಿಂತೆ ಬ್ಯಾಡ ನಮ್ಮ ನಾಳೆಗಳ ಬೆಳಗಾಕೆ
ತಯಾರಿಸ್ತಾರಂತೆ ಹೊಸ ಕರಡು.

೮) ಅರವತ್ತು ಮುಗೀತು ಇನ್ನೆನು
ಅರಳು ಮರಳು ಸುರು
ಅಂದ್ರು ಒಬ್ರು...
ಹುಟ್ಟೋವಾಗ್ಲೆ ತಲೆರಿಪೇರಿಯಾಗಾಕಿತ್ತು
ಇನ್ನಾದ್ರು ಹಚ್ಕೋಳಿ ಸುರು ಮತ್ತೊಬ್ರಂದ್ರು....!
(ಮೊನ್ನೆ ೨೬/೦೧ ಕ್ಕೆ ಈ ದೇಶಕ್ಕೆ ೬೦ ತುಂಬ್ತು..)

೯) ಇಟಾಲಿಯನ್ ನಲ್ಲಿ ಪತ್ರ
ಬರೀತಾರಂತೆ ಮೋದಿ
ಸೋನಿಯಾಗೆ,, ಬೆಲೆ ಬಿಸಿ ಬಗ್ಗೆ
ತಿನ್ನೋ ಪಾಸ್ತಾದ ರುಚಿ ಕಮ್ಮಿ ದಿನಾ ಕಳ್ದಂಗೆ
ಚಿಂತೆಯಾಗೈತೆ ಮೇಡಮ್ಗೆ...

೧೦) ಹಲ್ಲು ಮುರ್ಕೊಂಡ ಮುದಿಹುಲಿ ಮುಂಬೈಲಿ
ಗರ್ಜನೆ ಅಂತತಿಳ್ಕೊಂಡ್ ಕೂಗ್ದಾಗ
ಗೊಣಗಾಟ ಮಾತ್ರ ಕೇಳಿದೆ...
ಸೋತ ಸಿಟ್ಟು ತಡೀಕಾಗ್ದೆ ಅಮಾಯಕ್ರ
ಮ್ಯಾಲೆ ಎಗರಾಡಿದೆ....

೧೧) ಬಸವನ ಹುಳಕ್ಕೂ ಮೆಟ್ರೋ ನಿಗಮಕ್ಕೂ
ಓಡುವ ಪಂದ್ಯ
ಇತ್ತಂತೆ....
ಹುಳುವನ್ನು ಸೋಲಿಸಿದ "ನಮ್ಮ ಮೆಟ್ರೋ"
ಬೀಗಿತಂತೆ.....!

೧೨) ರಾಹುಲ್ ಅಂತಾನೆ ಬಿಹಾರಿಗಳು.
ಭಾಯಿಗಳು.. ಅಮರ್ ಗೀಗ ಮಾಜಿ ಶತ್ರು
ಮಾಯಾವತಿ ಬೆಹನು..
ರಾಜಕೀಯ ದೊಂಬರಾಟದಲ್ಲಿ ಶ್ರೀಸಾಮಾನ್ಯನೇ
ನಿಜವಾದ ಬಫೂನು...!

೧೩) ಮಾಜಿ ಉಗ್ರನಿಗೂ ದಕ್ಕಿತು ಪದ್ಮಶ್ರೀ..
ಜಿಂಕೆ ಕೊಂದ ಸೈಫು ಪ್ರಶಸ್ತಿ ಪಡೆದು
ಆದ ಸೇಫು
ಗೌರವಗಳೇ ಮಾರಾಟವಾಗೋವಾಗ
ಹಳೆದೆಲ್ಲ ಆಗೋಗಿದೆ ಮಾಫು....

೧೪) ರಾಹುಲ್ ಅಪ್ರಬುದ್ಧ ಕಾರಣ ಅವ ಇನ್ನೂ
ಬ್ರಹ್ಮಚಾರಿ.. ಇದು ಠಾಕ್ರೆ ಮಾಡಿದ
ಹೊಸ ಸಂಶೋಧನೆ...
ಆ ಮುದಿ ತಲೆಯಲ್ಲಿ ಇನ್ನೆಷ್ಟಿವೆಯೋ
ಇಂಥ ಬಾಲಿಶ ಯೋಚನೆ....!

೧೫) ಸಿಡಕ್ಯಾಕೆ ಠಾಕರೆ ಸಾಹೇಬಗೆ
ಅಂಬಾನಿ, ಸಚಿನ್ ಹಾಗೂ ಶಾರುಖ್
ಮೇಲೆ
ಅವರಿಂದಲೆ ಮುಂಬೈಗೊಂದು ಕಳೆ
ಇಲ್ವಾದ್ರೆ ನಿನ್ನ ಮುಖಕ್ಕೆ ಅದೇನು ಬೆಲೆ...?