ಎರವಲು ಬೇಡಿ ತಂದ ಉಸಿರು
ಅದ ಬಂಡವಾಳಮಾಡಿ
ಸಾಗಿಸಿಹ ವ್ಯಾಪಾರ...
೪೩ ಶ್ರಾವಣ ನೋಡಿದ ಈ
ಬಾಳ ಪುಟ ಒಮ್ಮೆ ತಿರುವಿಹಾಕುವ ...
ಬಯಕೆ ಬಿತ್ತಿ ಬೆವರು ಧಾರೆ ಎರೆದು
ಹಂಬಲಿಸಿದ್ದು ಹಸಿರಿಗಾಗಿ
ಯಂತ್ರವಾದ ಸ್ವಂತಿಕೆ ಬೆಳೆಯದ
ಗಳಿಗೆಗಳು ನಿರಂತರ...
ಅವಳ ಕಲ್ಪಿಸಿ ಇವಳೊಡನೆ ರಮಿಸುವ
ಅರೆಬೆಂದ ಕಾಮ, ತಿಂಗಳ ಜೀತಕ್ಕೆ
ಎಣಿಸುವ ವರಮಾನ...
ಮೂಲೆಯಲಿ ನಿಂತ ಫ್ರಿಜ್ಜು,ಟಿವಿ
ಹಣಿಕಿಕ್ಕುವ ಸಾಲದಕಂತು....
ತಲೆಮೇಲೊಂದು ಸೂರು
ದಾಖಲಿಸಲೇ ಇವುಗಳ ಸಾಧನೆಗಳೆಂದು?
ಮುಗಿಯದ ದ್ವಂದ್ವ ಇಡೀಯಾಗಿ ಆವರಿಸುವ
ನುಂಗಿ ನೀರು ಕುಡಿವ ಬದುಕು...
ಆದರೂ ಸಾಗಿಸಿಹೆ ಬಂಡಿ...
ಹುಡುಕುತಿರುವೆ ಹೊಸ ಅರ್ಥ...
ನಾಳಿನ ಅನೂಹ್ಯದಲಿ
ಮೂಡಲಿ ಸಮಾಧಾನ...ಸಾಂತ್ವನ
ಮತ್ತೊಮ್ಮೆ ನೆನಪುಗಳ ದಾಖಲಿಸುವಾಗ
ಆಗಿರಲಿ ಎಲ್ಲ ನವ ನವೀನ....!
----------------------------------------------------------------------------------------------
ಹಳೆ ಡೈರಿಯಲ್ಲಿ ನಾನೇ ಬರೆದ ಈ ಕವಿತೆ ಇತ್ತು ಆ ಕವಿತೆಯಲ್ಲಿ ೩೫ ಶ್ರಾವಣ ಅಂತ ಬರೆದಿದ್ದೆ ಈಗ ೪೩
ಅದ ಅಷ್ಟ ವ್ಯತ್ಯಾಸ ಮತ್ತ ಎಲ್ಲ ಅದ ಅದ...
Sunday, July 26, 2009
Wednesday, July 22, 2009
ಗಾನ ಗಂಗೆಯ ಜತೆ.....
ಎರಡು ವರ್ಷದ ಹಿಂದಿನ ದಸರಾ ನಾ ಎಂದೂ ಮರೆಯದ ದಿನ ಆ ದಿನ ಸಾಕ್ಷಾತ್ ಗಾನಸರಸ್ವತಿ
ಜೊತೆ ಕಾಲ ಕಳೆಯುವ ಅವಕಾಶ ಸಿಕ್ಕಿತ್ತು. ವಿಷಯ ಹೀಗಿತ್ತು -----ನನ್ನ ಭಾವ
ಡಾ. ಗೋವಿಂದ ಜಾಲೀಹಾಳ ಇವರು "ಜಾ.ಗೋ" ಎಂಬ ಕಾವ್ಯನಾಮದಿಂದ ಅನೇಕ ರಚನೆ ಮಾಡಿದ್ದಾರೆ
೩ ಕವನಸಂಕಲನ ಹೊರತಂದಿದ್ದಾರೆ.ವಿಶೇಷ ಅಂದರೆ ಭಾರತೀಯ ಶಾಸ್ತ್ರೀಯ ಸಂಗೀತಗಾರರು ಹಾಗೂ
ಅವರುಗಳ ಸಂಗೀತ-ಶೈಲಿಗಳನ್ನು ಕುರಿತು ೧೬ ಕವಿತೆಗಳನ್ನು "ಸಂಗೀತಕವಿತಾಕುಸುಮಮಾಲಾ" ಎಂಬ
ಶೀರ್ಷಿಕೆಯಡಿಯಲ್ಲಿ ಬರೆದಿದ್ದಾರೆ ಇದು "ಗೋವಾ ದರ್ಪಣ" ದಲ್ಲಿ ಪ್ರಕಟವೂ ಆಗಿತ್ತು.
ಗಂಗೂಬಾಯಿ ಹಾನಗಲ್ ಮೇಲೆ ಬರೆದ ಕವಿತೆ ಅವರಿಗೆ ನೀಡಿ ಅವರ ಆಶೀರ್ವಾದ ಪಡೆಯುವ ಇರಾದೆ
ಅವರಿಗಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಬರಲಾಗಲಿಲ್ಲ ಹೀಗಾಗಿ ಮಗ ಮಿಲಿಂದ,ನಾನು ಹಾಗೂ ಆ ವೇಳೆ ಅಲ್ಲಿಯೇಇದ್ದ ನನ್ನ ಹೆಂಡತಿ,ಮಗಳು "ಗಂಗಾ ಲಹರಿ"ಗೆ ಕಾಲಿಟ್ಟೆವು.
ಅಲ್ಲಿದ್ದರು ಗಾನಸರಸ್ವತಿ ತೀರ ಸರಳವಾದ ನಡೆನುಡಿ,ಮಾತು ...ಹಾಗೆನೋಡಿದರೆ ಹುಬ್ಬಳ್ಳಿಯ ಹಳೆ ತಲೆಮಾರು
ಎಲ್ಲ ಅವರಿಗೆ ಪರಿಚಿತ ನನ್ನ ತಂದೆ,ದೊಡ್ಡಪ್ಪ ಮುಂತಾದವರ ನೆನಪು ತೆಗೆದು ಮಾತಾಡಿದರು. ನನ್ನ ಮಗಳ
ಹೆಸರು ಕೇಳಿದರು ಸುನಿಧಿ ಎಂದರೆ " ಹಾಡ್ ಹಾಡ್ತೀಯೇನು ಕಲಿತೀ ಏನ..." ಎಂದು ಕೇಳಿದರು. ಬನ್ನಿ ಕೊಟ್ಟು
ನಮಸ್ಕರಿಸಿದಾಗ ಅಪ್ಯಾಯತೆಯಿಂದ ಹರಸಿದರು....
ಪಂಡಿತಾ ಗಂಗೂಬಾಯಿ ಹಾನಗಲ್
-------------------------------
ಶಾರೀರದ ವಜ್ರದುಂಡಿಯ ಕಲ್ಲ ಕಡೆ-ಕಡೆದು
ಶಾಸ್ತ್ರೀಯ ಶುದ್ಧ ಸಂಗೀತದ ಅಂತರ್ಗಂಗೆಯ
ಪ್ರವಹಿಸಿದ ಸಂಗೀತ-ಭಗೀರಥಿ ! ಹೊಂಗೆಯ
ಮರದಡಿಯ ತಂಪು,ಮಾಮರಕಾಸರೆ ಪಡೆದು
ಹಾರಿಬಂದು ಹಾಡಿದ ಕೋಗಿಲೆಯ ಧ್ವನಿಯಿಂಪು,
ಕಾದ ಕಬ್ಬಿಣ ಶಲಾಕೆಯ ನಿಗಿ-ನಿಗಿ ಕೆಂಪು,
ನಿಖರ ತಾಕತ್ತು ,ಪ್ರಖರ ಪ್ರಹಾರ ಹೊಡೆದು
ಚಕಿತಗೊಳಿಪ ಗತ್ತು ಇವುಗಳೆಲ್ಲ ಮೇಳವಿಸಿದ
ಸಂಗೀತಸರಸತಿಯ ಹೆಮ್ಮೆಯ ನಾಸಿಕ ಧರಿಸಿದ
ಸಿಂಗಾರದ ಮುತ್ತಿನ ನತ್ತು ! ಕಂನಾಡು ಪಡೆದು
ನಾಡಿಗಿಡೀ ನೀಡಿದ ಕಿರಾನಾ-ಸಂಪತ್ತು ,
ತಾಯಿ ಅಂಬೂಬಾಯಿ ಹುಲಗೂರ ಗುರುದತ್ತು
ರಚನೆ: ಜಾ.ಗೋ
(ಡಾ.ಗೋವಿಂದ ಜಾಲೀಹಾಳ)
ಮೇಲಿನ ಕವನ ಗಂಗಾಮಾಯಿಗೆ ಓದಿ ತೋರಿಸುವ ಸೌಭಾಗ್ಯ ನನ್ನದಾಗಿತ್ತು. ಸುಮಾರು ಒಂದು-ಒಂದೂವರಿ
ತಾಸು ಅವರೊಡನೆ ಕಳೆದೆವು. ಅವರ ಮ್ಯುಸಿಯಂ ಒಂದು ಅಪರೂಪ ಅದ ನೋಡುವಾಗ ನಮ್ಮ ಭಾರತದೇಶದ
ಸಂಗೀತ ಪರಂಪರೆಯ ಭವ್ಯತೆ ಗೋಚರವಾಗುತ್ತದೆ. ಆ ಶರಧಿಯಲ್ಲಿ ನಾವು ತೃಣ ಸಮಾನರು. ಅಲ್ಲಿಯ ಭಾವಚಿತ್ರಗಳು, ಸಂಗೀತ ಉಪಕರಣಗಳು ಭವ್ಯ ಇತಿಹಾಸದ ಕುರುಹುಗಳಾಗಿ ಪ್ರಜ್ವಲಿಸಿವೆ.ನಿಜವೇ ತಾನೇ
ಸಂಗೀತ ನಮ್ಮ ದೇಶದಲ್ಲಿ ಎಲ್ಲ ಮತ ,ಪ್ರಾಂತ ,ಜಾತಿ ಮೀರಿ ಪ್ರಜ್ವಲಿಸುತ್ತಿರುವ ನಕ್ಷತ್ರ...ತಲೆ ಮಾರಿಂದ ಹೊಸ
ಪೀಳಿಗೆಗೆ ಈ ಅಮೃತವಾಹಿನಿ ಹರಿದು ಬರುತ್ತಲೇ ಇದೆ...
Friday, July 17, 2009
ತಾಜ ಮಹಲ್ --ಕೆಲ ಹನಿಗಳು
೧) ಸೂರ್ಯ ಚಂದ್ರ ನಕ್ಷತ್ರ ತಾಜ್
ಎಲ್ಲ ಶಾಶ್ವತವಾಗಿವೆ
ಅಂತೆಯೇ ಮುಮ್ತಾಜ್ ಳ ಗೆಜ್ಜೆಗೆ
ಸ್ಪಂದಿಸುತಿರುವ ಸುಲ್ತಾನನ ಹೃದಯ ಕೂಡ...!
೨) ಅದೆಷ್ಟೋ ಪ್ರೇಮಿಗಳು ತಾಜ್
ಎದಿರು ನಿಂತು ಅಮರ ಪ್ರೇಮದ ವಾಗ್ದಾನ
ಮಾಡುತ್ತಾರೆ....
ಹೊರಗೆ ಬಂದು ಬೇರೆ ದಾರಿ ತುಳಿಯುತ್ತಾರೆ...!
೩) ಬಡಪಾಯಿ ಕೂಲಿ ಅವ ಇಟ್ಟಿಗೆ ಮೇಲೆ ಇಟ್ಟಿಗೆ
ಸೇರಿಸಿ ಕಟ್ಟಿದ ತಾಜ್...
ಶಹಜಹಾನ್ ನ ಪ್ರೇಮ ಹೊಗಳುವವರೇ ಎಲ್ಲ
ಕೂಲಿಯ ಬೆವರಿಗೆ ಸ್ಪಂದಿಸುವರಾರಿಲ್ಲ.....!
೪) ಪ್ರತಿ ಬೆಳದಿಂಗಳ ರಾತ್ರಿಯಲಿ
ಕೈಯಲಿ ಮಧು ಬಟ್ಟಲು ಹಿಡಿದು
ಶಹಜಹಾನ್ ಕಾಯುತ್ತಿದ್ದಾನೆ
ಗೋರಿಯಿಂದೆದ್ದು ಬರುವ ಮುಮ್ತಾಜ್ ಳಿಗಾಗಿ.....
೫) ಬಿಳಿ ಸಂಗಮವರಿ ಕಲ್ಲದು
ಪ್ರೇಮ ಕಾವ್ಯ ಬರೆಯಿಸಿಕೊಂಡ
ಪತ್ರ ವಾಗಿದ್ದು
ತಾಜ್ ನ ಪವಾಡ...!
೬) ತಾಜ್ ನ ನೆರಳಲಿ ನಿಂತರೆ ಸಾಕು
ಜೀವನವಿದು ಮಿಲನ ಅಗಲಿಕೆಯ
ಹೊರತು ಮತ್ತೇನಲ್ಲ ಎಂಬ
ಸತ್ಯ ಹೊಳೆಯುತ್ತದೆ....
೭) ಎರಡು ಆತ್ಮಗಳವು ತಾಜ್ ನ
ಅಂಗಳದಲಿ ಮಿಲನ ವಾಗುತ್ತಲೆ ಇವೆ
ಮೌನ ಸಾಮ್ರಾಜ್ಯದಲಿ
ಈ ಶಬ್ದಗಳ ಬಡಿವಾರ ಬೇಕೆ....
೮) ಹೇ ಪ್ರೀತಿ ಆ ಸುಲ್ತಾನನ
ಹಳವಂಡವಾಗಿ ಕೈದಾಗಬೇಡ...
ಬಾ ಈ ಬಡವನ ಗುಡಿಸಿಲಿಗೂ
ಕತ್ತಲಾಗಿದೆ ನಿಜ ನಿನಗಾಗಿ ಪ್ರಣತಿ ಹಚ್ಚುವೆ
ಮತ್ತೆ ಕಾಯುವೆ ...
( ಈ ೮ ನೇದ ಹನಿಮೂಲ ಸಾಹಿರ್ ಬರೆದ ಶೇರು ...ಮೂಲಕ್ಕೆ ಆಭಾಸ ಅನಿಸಿದರೆ ಕ್ಷಮೆ ಇರಲಿ.....)
ಎಲ್ಲ ಶಾಶ್ವತವಾಗಿವೆ
ಅಂತೆಯೇ ಮುಮ್ತಾಜ್ ಳ ಗೆಜ್ಜೆಗೆ
ಸ್ಪಂದಿಸುತಿರುವ ಸುಲ್ತಾನನ ಹೃದಯ ಕೂಡ...!
೨) ಅದೆಷ್ಟೋ ಪ್ರೇಮಿಗಳು ತಾಜ್
ಎದಿರು ನಿಂತು ಅಮರ ಪ್ರೇಮದ ವಾಗ್ದಾನ
ಮಾಡುತ್ತಾರೆ....
ಹೊರಗೆ ಬಂದು ಬೇರೆ ದಾರಿ ತುಳಿಯುತ್ತಾರೆ...!
೩) ಬಡಪಾಯಿ ಕೂಲಿ ಅವ ಇಟ್ಟಿಗೆ ಮೇಲೆ ಇಟ್ಟಿಗೆ
ಸೇರಿಸಿ ಕಟ್ಟಿದ ತಾಜ್...
ಶಹಜಹಾನ್ ನ ಪ್ರೇಮ ಹೊಗಳುವವರೇ ಎಲ್ಲ
ಕೂಲಿಯ ಬೆವರಿಗೆ ಸ್ಪಂದಿಸುವರಾರಿಲ್ಲ.....!
೪) ಪ್ರತಿ ಬೆಳದಿಂಗಳ ರಾತ್ರಿಯಲಿ
ಕೈಯಲಿ ಮಧು ಬಟ್ಟಲು ಹಿಡಿದು
ಶಹಜಹಾನ್ ಕಾಯುತ್ತಿದ್ದಾನೆ
ಗೋರಿಯಿಂದೆದ್ದು ಬರುವ ಮುಮ್ತಾಜ್ ಳಿಗಾಗಿ.....
೫) ಬಿಳಿ ಸಂಗಮವರಿ ಕಲ್ಲದು
ಪ್ರೇಮ ಕಾವ್ಯ ಬರೆಯಿಸಿಕೊಂಡ
ಪತ್ರ ವಾಗಿದ್ದು
ತಾಜ್ ನ ಪವಾಡ...!
೬) ತಾಜ್ ನ ನೆರಳಲಿ ನಿಂತರೆ ಸಾಕು
ಜೀವನವಿದು ಮಿಲನ ಅಗಲಿಕೆಯ
ಹೊರತು ಮತ್ತೇನಲ್ಲ ಎಂಬ
ಸತ್ಯ ಹೊಳೆಯುತ್ತದೆ....
೭) ಎರಡು ಆತ್ಮಗಳವು ತಾಜ್ ನ
ಅಂಗಳದಲಿ ಮಿಲನ ವಾಗುತ್ತಲೆ ಇವೆ
ಮೌನ ಸಾಮ್ರಾಜ್ಯದಲಿ
ಈ ಶಬ್ದಗಳ ಬಡಿವಾರ ಬೇಕೆ....
೮) ಹೇ ಪ್ರೀತಿ ಆ ಸುಲ್ತಾನನ
ಹಳವಂಡವಾಗಿ ಕೈದಾಗಬೇಡ...
ಬಾ ಈ ಬಡವನ ಗುಡಿಸಿಲಿಗೂ
ಕತ್ತಲಾಗಿದೆ ನಿಜ ನಿನಗಾಗಿ ಪ್ರಣತಿ ಹಚ್ಚುವೆ
ಮತ್ತೆ ಕಾಯುವೆ ...
( ಈ ೮ ನೇದ ಹನಿಮೂಲ ಸಾಹಿರ್ ಬರೆದ ಶೇರು ...ಮೂಲಕ್ಕೆ ಆಭಾಸ ಅನಿಸಿದರೆ ಕ್ಷಮೆ ಇರಲಿ.....)
Saturday, July 11, 2009
ಪ್ರೇಮ ನಿವೇದನೆಯ ಪರಿ..
ಕೆಲವು ಹಾಡುಗಳು ಬಹಳ ಆತ್ಮೀಯವಾಗುತ್ತವೆ ನಾನು ಹೇಳಹೊರಟಿರುವುದು ಹಳೆಯ ಹಾಡುಗಳ ಬಗ್ಗೆ... ಇಲ್ಲಿ ವಿಶೇಶವೆಂದರೆ
ನಾಯಕಿಯರು ಮುಂದಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ....ಹೌದು ನಮ್ಮ ಬಹಳಷ್ಟು ನಿರ್ದೇಶಕರು ಹೆಣ್ಣು ಗಂಡಿನಿಂದ
ಚುಡಾಯಿಸುವ ಗೀತೆಗಳನ್ನೇ ಬರೆಸಿದ್ದಾರೆ ಹಾಗೂ ಅದೇ ಸರಿ ಎಂದು ನಂಬಿದ್ದರೂ ಕೂಡ...ಆದರೆ ಮಿಂಚುಳ್ಳಿಯಂತೆ ಈ ಕೆಳಗಿನ
ಗೀತೆಗಳು ಸ್ವಲ್ಪ ಭಿನ್ನ ವಾಗಿವೆ ಈ ಹಾಡುಗಳಲ್ಲಿ ತುಂಟತನವಿದೆ, ಆಹ್ವಾನವಿದೆ..ಆದರೂ ಒಂಥರಾ ಆತ್ಮೀಯತೆ ಇದೆ...
೧) " ಸಿಟ್ಟ್ಯಾಕೋ ಸಿಡಕ್ಯಾಕೋ ನನ್ ಜಾಣ...." ಎಲ್ ಆರ್ ಈಶ್ವರಿ ಹಾಡಿದ ಈ ಹಾಡು ಎಂದಿಗೂ ಹಸಿರಾಗಿದೆ. ನಾಯಕಿ ಇಲ್ಲಿ
ನಾಯಕನಿಗೆ ಮುಕ್ತವಾಗಿ ಆಹ್ವಾನ ನೀಡುತ್ತಾಳೆ... ಒಟ್ಟಾಗಿ ಇರುವ ಎಂದು. ಬಹುಶ ಕನ್ನಡದ ಮೊದಲ bold ಹಾಡು
ಇದು ಆಗಿರಲು ಸಾಕು. ಆದರೆ ನನಗೆ ಈ ಗೀತೆಯ ಬಗ್ಗೆ ಹೆಚ್ಚು ಗೊತ್ತಿಲ್ಲ ಯಾರು ಬರೆದವ್ರು, ಯಾವ ಚಿತ್ರದ್ದು ಇತ್ಯಾದಿ.
೨) "ನಿಲ್ಲಯ್ಯೋ ನಿಲ್ಲೊ ಓ ಕೆಂಚು ಮೀಸ್ಯೋನೆ..." ಮಂಜುಳಾ ಆಗ top ನಲ್ಲಿದ್ದರು... ಬಜಾರಿ ಪಾತ್ರ ಮಾಡುವುದರಲ್ಲಿ
ಎತ್ಟಿದ ಕ್ಯೆ . ನಾಯಕನ ಬೆನ್ನು ಹತ್ತಿ ತನಗೆ ಅವನ ಮೇಲೆ ಮನಸ್ಸಾಗಿರುವದನ್ನು ಹೇಳುತ್ತ ತಾನು ಪಟ್ಟ ಪಾಡು ಹೇಳುತ್ತಾಳೆ..
"ಗುಡ್ಡ ಬೆಟ್ಟ ಹತ್ತಿ ಬಂದೆ ಹಳ್ಳ ಕೊಳ್ಳ ದಾಟಿ ಬಂದೆ " ಉದಯಶಂಕರ ಈ ಹಾಡು ಬರೆದಾಗ ಅವರ ಮನದಲ್ಲಿ ಏನಿತ್ತೋ
ಗೊತ್ತಿಲ್ಲ. ಆದರೆ ಹಾಡು ಅದ್ಬುತ ವಾಗಿ ಮೂಡಿ ಬಂದಿದೆ. "ಬದುಕು ಬಂಗಾರವಾಯಿತು" ನಮ್ಮ ಹುಬ್ಬಳ್ಳಿ ಹಿರಿಯರು ತೆಗೆದ
ಚಿತ್ರ. ರಂಗರಾವ್ ಸಂಗೀತ ಇಂಪಾಗಿತ್ತು.ಜಾನಕಿ ಹಾಡು ಒಂಥರಾ ಟ್ರೆಂಡಸೆಟರ್ ಇದ್ದ ಹಾಗಿತ್ತು..
೩) " ಮುತ್ತು ಮಳೆಗಾಗಿ ಹೊತ್ತು ಕಾದಿದೆ...." ವಾಣಿ ಜಯರಾಂ ಹಾಡಿದ ತುಂಟ ಹಾಡು. ಇಲ್ಲಿ ನಾಯಕಿ ಶಹರದವಳು.
ಅವಳ ಆಹ್ವಾನ ಎಂಥದು ನೋಡ್ರಿ " ಕೆನ್ನೆ ಕೆಂಪಗಾಗಿ ತಂಪು ಕೋರಿದೆ ". ಗೀತಪ್ರಿಯ ಬರೆದ ರಸಿಕ ಗೀತೆ ಇದು.
ವಿಜಯ್ ಭಾಸ್ಕರ ಸಂಗೀತ ಸೊಗಸಾಗಿದೆ. "ಬೆಳುವಲದ ಮಡಿಲಲ್ಲಿ " ಒಂದು ಅಪರೂಪದ ಚಿತ್ರ - black&white-
ಸಿನೇಮಾ.ಹುಬ್ಬಳ್ಳಿ ಹುಡುಗಿ ಶಾಂತಲಾ ದುಂಡುಗಲ್ಲದ ಚಂದ್ರಶೇಖರ(ಆ ಕಾಲದ...!) ಛೇಡಿಸುವ ಈ ಹಾಡು ಸೊಗಸಾಗಿತ್ತು.
೪) " ಏ ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ ದನಿಯಲಿ ವಿನೂತನ ಜೀವ ಭಾವ ನೀ ತಂದೆ "
ಎಂತಹ ಸೊಗಸಾದ ಕಲ್ಪನೆ ನಾಯಕಿಯ ಎದೆಯಲ್ಲಿ ಕೋಗಿಲೆ ಇದೆ ಪ್ರೇಮ ಅದಕೆ ಹೊಸ ಭಾಶೆ ಬರೆದಿದೆ.
ಒಂದು ಸಾಮಾನ್ಯ ಸನ್ನಿವೇಶ ಆದರೇನು ಉದಯ್ ಶಂಕರ್ ಎನ್ನುವ ಮಾಂತ್ರಿಕ ಹೊಸ ದಿಕ್ಕು ತೋರಿಸಿದರು.
ಜಾನಕಿ ಹಾಡಿದ ಒಂದು ಸುಂದರ ಗೀತೆ ಇದು. ರಾಜನ್ ನಾಗೇಂದ್ರ ರ ಸಂಯೋಜನೆಯಲ್ಲಿ ಮೂಡಿದ ಹಾಡು
ಅಜರಾಮರ. ಅಣ್ಣಾವ್ರ ಸಿಡುಕು ಮುಖ , ಲಕ್ಷ್ಮಿಯ "ಅದಾ" ಎರಡರ ಮಿಲಾಪ ಹೇಗಿತ್ತು ಗೊತ್ತಾ?
೫) "ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ..." ಗ್ರಾಮೀಣ ಸೊಗಡಿನ ಚಿತ್ರ "ಪರಸಂಗದ ಗೆಂಡೆತಿಮ್ಮ". ಸನ್ನಿವೇಶ
ನಾಜೂಕಿನದ್ದು. ವಿವಾಹಿತ ಮಹಿಳೆ ಪರಪುರುಷನನ್ನು ಮೋಹಿಸಿರುತ್ತಾಳೆ ಆದರೆ ಹಾಡಿನಲ್ಲಿ ಎಲ್ಲೂ ಅಶ್ಲೀಲತೆ ಇಲ್ಲ
ಇದ್ದದ್ದು ಕಾವ್ಯದ ಕುಸುರಿ ಕೆಲಸ. " ಆಸೆ ಗಂಧ ಹರಡೈತೆ " ಎನ್ನುವ ಸಾಲು ನೀಡುವ ಪುಳಕದ ಮಜಾ ಹೇಗಿದೆ.
ದೊಡ್ದ ರಂಗೇಗೌಡರು ಗ್ರಾಮೀಣ ಹಿನ್ನೆಲೆಯವರು. ತಮ್ಮ ಅನುಭವ ಧಾರೆ ಎರೆದಿದ್ದಾರೆ.
ಜಾನಕಿಯವರೇ ಸ್ವತ ಹೇಳಿದ್ದಾರೆ ಅವರು ಹಾಡಿದ ಉತ್ತಮ ಗೀತೆಗಳಲ್ಲಿ ಇದು ಒಂದು ಎಂದು. ನಿಜವೇ ರೀಟಾ ಅಂಚನ್ ಎಂತಹ
ಸೌಂದರ್ಯವತಿ...ಮಾನು ಅವರ ಕಳ್ಳ ನಗು ನೆನಪಿದೆಯೇ.....?
೬) " ಕಣ್ಣೀನ ಚೂರಿಯಲಿರುವಾ ಮರೆ ಮಾಡಿ ಬೆರಳಲಿ ಕರೆವಾ ...ಇವನ ದಿಗರೇನ ಕುದರಿ ಚದರೇನ...." ಅಪ್ಪಟ ದೇಶಿ ಹಾಡು
ಕಂಚಿನ ಕಂಠದ ಸುಶೀಲಾರ ಈ ಹಾಡು ಅದೆಷ್ಟು ಛಂದ.ಹಳ್ಳೀ ಹೆಣ್ಣಮಗಳು ನಿರ್ಭಿಡೆ ಸ್ವಭಾವದವಳು. ತನಗನಿಸಿದ್ದು ನೇರವಾಗಿ ಹೇಳುವವಳು ಗೆಳೆಯ ಬೇಲಿ ಜಿಗ್ಯಾವ ಅದೂ ಅಕಿಗೆ ಗೊತ್ತು ಆದರೂ ಅವನ ಬಗ್ಗೆ ಕೌತುಕ ಅದ. "ಹತ್ತ್ಯಾನ ಹಾರುವ
ಕುದುರಿ ಹಾರ್ಯಾನ ಹಿತ್ತಲ ಬೇಲಿ ಇವನ ಮ್ಯಾಲ ಕೂತಾವ ಪಿರತಿ ಹಗಲಿ ರಾತ್ರಿ ನನಗಿವನ ಭ್ರಾಂತಿ..." ಒಂಥರಾ ತೆರೆದ ಪುಸ್ತಕ ಅವಳ ಮನಸ್ಸು...ಓದಿದವರಿಗೆ ಮಾತ್ರ ತಿಳೀತದ ಅದರ ಸೊಗಸು...!
ನಾಯಕಿಯರು ಮುಂದಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ....ಹೌದು ನಮ್ಮ ಬಹಳಷ್ಟು ನಿರ್ದೇಶಕರು ಹೆಣ್ಣು ಗಂಡಿನಿಂದ
ಚುಡಾಯಿಸುವ ಗೀತೆಗಳನ್ನೇ ಬರೆಸಿದ್ದಾರೆ ಹಾಗೂ ಅದೇ ಸರಿ ಎಂದು ನಂಬಿದ್ದರೂ ಕೂಡ...ಆದರೆ ಮಿಂಚುಳ್ಳಿಯಂತೆ ಈ ಕೆಳಗಿನ
ಗೀತೆಗಳು ಸ್ವಲ್ಪ ಭಿನ್ನ ವಾಗಿವೆ ಈ ಹಾಡುಗಳಲ್ಲಿ ತುಂಟತನವಿದೆ, ಆಹ್ವಾನವಿದೆ..ಆದರೂ ಒಂಥರಾ ಆತ್ಮೀಯತೆ ಇದೆ...
೧) " ಸಿಟ್ಟ್ಯಾಕೋ ಸಿಡಕ್ಯಾಕೋ ನನ್ ಜಾಣ...." ಎಲ್ ಆರ್ ಈಶ್ವರಿ ಹಾಡಿದ ಈ ಹಾಡು ಎಂದಿಗೂ ಹಸಿರಾಗಿದೆ. ನಾಯಕಿ ಇಲ್ಲಿ
ನಾಯಕನಿಗೆ ಮುಕ್ತವಾಗಿ ಆಹ್ವಾನ ನೀಡುತ್ತಾಳೆ... ಒಟ್ಟಾಗಿ ಇರುವ ಎಂದು. ಬಹುಶ ಕನ್ನಡದ ಮೊದಲ bold ಹಾಡು
ಇದು ಆಗಿರಲು ಸಾಕು. ಆದರೆ ನನಗೆ ಈ ಗೀತೆಯ ಬಗ್ಗೆ ಹೆಚ್ಚು ಗೊತ್ತಿಲ್ಲ ಯಾರು ಬರೆದವ್ರು, ಯಾವ ಚಿತ್ರದ್ದು ಇತ್ಯಾದಿ.
೨) "ನಿಲ್ಲಯ್ಯೋ ನಿಲ್ಲೊ ಓ ಕೆಂಚು ಮೀಸ್ಯೋನೆ..." ಮಂಜುಳಾ ಆಗ top ನಲ್ಲಿದ್ದರು... ಬಜಾರಿ ಪಾತ್ರ ಮಾಡುವುದರಲ್ಲಿ
ಎತ್ಟಿದ ಕ್ಯೆ . ನಾಯಕನ ಬೆನ್ನು ಹತ್ತಿ ತನಗೆ ಅವನ ಮೇಲೆ ಮನಸ್ಸಾಗಿರುವದನ್ನು ಹೇಳುತ್ತ ತಾನು ಪಟ್ಟ ಪಾಡು ಹೇಳುತ್ತಾಳೆ..
"ಗುಡ್ಡ ಬೆಟ್ಟ ಹತ್ತಿ ಬಂದೆ ಹಳ್ಳ ಕೊಳ್ಳ ದಾಟಿ ಬಂದೆ " ಉದಯಶಂಕರ ಈ ಹಾಡು ಬರೆದಾಗ ಅವರ ಮನದಲ್ಲಿ ಏನಿತ್ತೋ
ಗೊತ್ತಿಲ್ಲ. ಆದರೆ ಹಾಡು ಅದ್ಬುತ ವಾಗಿ ಮೂಡಿ ಬಂದಿದೆ. "ಬದುಕು ಬಂಗಾರವಾಯಿತು" ನಮ್ಮ ಹುಬ್ಬಳ್ಳಿ ಹಿರಿಯರು ತೆಗೆದ
ಚಿತ್ರ. ರಂಗರಾವ್ ಸಂಗೀತ ಇಂಪಾಗಿತ್ತು.ಜಾನಕಿ ಹಾಡು ಒಂಥರಾ ಟ್ರೆಂಡಸೆಟರ್ ಇದ್ದ ಹಾಗಿತ್ತು..
೩) " ಮುತ್ತು ಮಳೆಗಾಗಿ ಹೊತ್ತು ಕಾದಿದೆ...." ವಾಣಿ ಜಯರಾಂ ಹಾಡಿದ ತುಂಟ ಹಾಡು. ಇಲ್ಲಿ ನಾಯಕಿ ಶಹರದವಳು.
ಅವಳ ಆಹ್ವಾನ ಎಂಥದು ನೋಡ್ರಿ " ಕೆನ್ನೆ ಕೆಂಪಗಾಗಿ ತಂಪು ಕೋರಿದೆ ". ಗೀತಪ್ರಿಯ ಬರೆದ ರಸಿಕ ಗೀತೆ ಇದು.
ವಿಜಯ್ ಭಾಸ್ಕರ ಸಂಗೀತ ಸೊಗಸಾಗಿದೆ. "ಬೆಳುವಲದ ಮಡಿಲಲ್ಲಿ " ಒಂದು ಅಪರೂಪದ ಚಿತ್ರ - black&white-
ಸಿನೇಮಾ.ಹುಬ್ಬಳ್ಳಿ ಹುಡುಗಿ ಶಾಂತಲಾ ದುಂಡುಗಲ್ಲದ ಚಂದ್ರಶೇಖರ(ಆ ಕಾಲದ...!) ಛೇಡಿಸುವ ಈ ಹಾಡು ಸೊಗಸಾಗಿತ್ತು.
೪) " ಏ ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ ದನಿಯಲಿ ವಿನೂತನ ಜೀವ ಭಾವ ನೀ ತಂದೆ "
ಎಂತಹ ಸೊಗಸಾದ ಕಲ್ಪನೆ ನಾಯಕಿಯ ಎದೆಯಲ್ಲಿ ಕೋಗಿಲೆ ಇದೆ ಪ್ರೇಮ ಅದಕೆ ಹೊಸ ಭಾಶೆ ಬರೆದಿದೆ.
ಒಂದು ಸಾಮಾನ್ಯ ಸನ್ನಿವೇಶ ಆದರೇನು ಉದಯ್ ಶಂಕರ್ ಎನ್ನುವ ಮಾಂತ್ರಿಕ ಹೊಸ ದಿಕ್ಕು ತೋರಿಸಿದರು.
ಜಾನಕಿ ಹಾಡಿದ ಒಂದು ಸುಂದರ ಗೀತೆ ಇದು. ರಾಜನ್ ನಾಗೇಂದ್ರ ರ ಸಂಯೋಜನೆಯಲ್ಲಿ ಮೂಡಿದ ಹಾಡು
ಅಜರಾಮರ. ಅಣ್ಣಾವ್ರ ಸಿಡುಕು ಮುಖ , ಲಕ್ಷ್ಮಿಯ "ಅದಾ" ಎರಡರ ಮಿಲಾಪ ಹೇಗಿತ್ತು ಗೊತ್ತಾ?
೫) "ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ..." ಗ್ರಾಮೀಣ ಸೊಗಡಿನ ಚಿತ್ರ "ಪರಸಂಗದ ಗೆಂಡೆತಿಮ್ಮ". ಸನ್ನಿವೇಶ
ನಾಜೂಕಿನದ್ದು. ವಿವಾಹಿತ ಮಹಿಳೆ ಪರಪುರುಷನನ್ನು ಮೋಹಿಸಿರುತ್ತಾಳೆ ಆದರೆ ಹಾಡಿನಲ್ಲಿ ಎಲ್ಲೂ ಅಶ್ಲೀಲತೆ ಇಲ್ಲ
ಇದ್ದದ್ದು ಕಾವ್ಯದ ಕುಸುರಿ ಕೆಲಸ. " ಆಸೆ ಗಂಧ ಹರಡೈತೆ " ಎನ್ನುವ ಸಾಲು ನೀಡುವ ಪುಳಕದ ಮಜಾ ಹೇಗಿದೆ.
ದೊಡ್ದ ರಂಗೇಗೌಡರು ಗ್ರಾಮೀಣ ಹಿನ್ನೆಲೆಯವರು. ತಮ್ಮ ಅನುಭವ ಧಾರೆ ಎರೆದಿದ್ದಾರೆ.
ಜಾನಕಿಯವರೇ ಸ್ವತ ಹೇಳಿದ್ದಾರೆ ಅವರು ಹಾಡಿದ ಉತ್ತಮ ಗೀತೆಗಳಲ್ಲಿ ಇದು ಒಂದು ಎಂದು. ನಿಜವೇ ರೀಟಾ ಅಂಚನ್ ಎಂತಹ
ಸೌಂದರ್ಯವತಿ...ಮಾನು ಅವರ ಕಳ್ಳ ನಗು ನೆನಪಿದೆಯೇ.....?
೬) " ಕಣ್ಣೀನ ಚೂರಿಯಲಿರುವಾ ಮರೆ ಮಾಡಿ ಬೆರಳಲಿ ಕರೆವಾ ...ಇವನ ದಿಗರೇನ ಕುದರಿ ಚದರೇನ...." ಅಪ್ಪಟ ದೇಶಿ ಹಾಡು
ಕಂಚಿನ ಕಂಠದ ಸುಶೀಲಾರ ಈ ಹಾಡು ಅದೆಷ್ಟು ಛಂದ.ಹಳ್ಳೀ ಹೆಣ್ಣಮಗಳು ನಿರ್ಭಿಡೆ ಸ್ವಭಾವದವಳು. ತನಗನಿಸಿದ್ದು ನೇರವಾಗಿ ಹೇಳುವವಳು ಗೆಳೆಯ ಬೇಲಿ ಜಿಗ್ಯಾವ ಅದೂ ಅಕಿಗೆ ಗೊತ್ತು ಆದರೂ ಅವನ ಬಗ್ಗೆ ಕೌತುಕ ಅದ. "ಹತ್ತ್ಯಾನ ಹಾರುವ
ಕುದುರಿ ಹಾರ್ಯಾನ ಹಿತ್ತಲ ಬೇಲಿ ಇವನ ಮ್ಯಾಲ ಕೂತಾವ ಪಿರತಿ ಹಗಲಿ ರಾತ್ರಿ ನನಗಿವನ ಭ್ರಾಂತಿ..." ಒಂಥರಾ ತೆರೆದ ಪುಸ್ತಕ ಅವಳ ಮನಸ್ಸು...ಓದಿದವರಿಗೆ ಮಾತ್ರ ತಿಳೀತದ ಅದರ ಸೊಗಸು...!
Wednesday, July 8, 2009
ಸದಾ ಕಾಡುವ ಹಾಡು---3
ಹಿಂದಿ ಸಿನೇಮಾ ಇರುವವರೆಗೂ ಕೆಲ ಹಾಡು ಸದಾ ಗುನುಗುನಿಸಲ್ಪಡುತ್ತವೆ...ಬಹುಷಃ ಸೂರ್ಯ ಚಂದ್ರ ಇರುವವರೆಗೂ ಅಂತ ಹೇಳಬಹುದೇನೋ ಈ ಹಾಡುಗಳಲ್ಲಿ ಒಂದು ಅದ್ಭುತ ರೀತಿಯ ಶಬ್ದಗಳ ಚಾಲಾಕಿತನ ಇದೆ
ಈ ಸಾಲು ಗಮನಿಸಿ "ಖಾಲಿ ಹಾಥ ಶಾಮ್ ಆಯಿ ಹೈ ಖಾಲಿ ಹಾಥ ಜಾಯೇಗಿ ..", " ಅಪನಾ ಕಿನಾರಾ ನದಿಯಾಕಿ ಧಾರಾ ಹೈ..", " ಪಾನಿ ಪಾನಿರೆ ನೈನೊಂಮೆ ಭರ್ ಜಾ ನಿಂದೇ ಖಾಲಿ ಕರ್ ಜಾ...".ಮೇಲಿನ ಸಾಲುಗಳಲ್ಲಿ ಕವಿ ತನ್ನ ಪ್ರತಿಭೆ ಪ್ರದರ್ಶಿಸಿದ್ದು ಮಾತ್ರವಲ್ಲ ಬದಲು ಶಬ್ದಗಳ ಬಲೆ ನೇಯ್ದಿದ್ದಾನೆ ಆ ಬಲೆಯಲ್ಲಿ ಬಿದ್ದು ಒದ್ದಾಡುವ ನಾವು ನಿಧಾನವಾಗಿ ಅವನ
ಪ್ರಭಾವ ವಲಯಕ್ಕೆ ಸಿಗುತ್ತೇವೆ ಆ ಕಲೆಗಾರನ ಕುಸುರಿ ಕೆಲಸಕ್ಕೆ ಮಾರು ಹೋಗುತ್ತೇವೆ.... ಮೇಲಿನ ಎಲ್ಲ ಹಾಡು ಬರೆದವರು
ಗುಲ್ಜಾರ್ . ಹಿಂದಿ ಸಿನೆಮಾ ಕಂಡ ಪ್ರತಿಭೆಯ ಖನಿ ಈತ. ಈತ ಬರೀ ಹಾಡು ಸಂಭಾಷಣೆ ಗೆ ಮಾತ್ರ ಸೀಮಿತವಾಗಲಿಲ್ಲ ಬದಲು ತೀರ ಸಂವೇದನೆಯ ಸಿನೇಮಾ ತೆಗೆದ ವಾಹ್ ಎನಿಸಿಕೊಂಡ. ಒಮ್ಮೆ ಕಣ್ಣು ಹಾಯಿಸುವ....."ಪರಿಚಯ್ ","ಕೋಶಿಶ್ ", " ಖುಷಬೂ","ಮಾಚಿಸ್ " ," ಇಜಾಜತ್" ಎಂತೆಂತಹ ಸಿನೇಮಾಗಳು...ನಾನು "ಮೌಸಮ್" ಉಲ್ಲೇಖಿಸುವದನ್ನು ಮರೆತೆ.
ಗುಲ್ಜಾರ್ ಸಂವೇದನಶೀಲ ಕಥೆಗಾರ ಕೂಡ. ನಾನು ಇಲ್ಲಿ ಹೇಳಹೊರಟಿರುವುದು ಒಂದು ಹಾಡಿನ ಬಗ್ಗೆ ಪೀಠಿಕೆ ಉದ್ದ ಅನಿಸಿತೇ ಆದರೆ ಹಾಡಿನ ಸೂಕ್ಷ್ಮತೆ ಅನುಭವಿಸಬೇಕಾದರೆ ಕರ್ತನ ಗುಣಗಾನ ಮಾಡಲೇ ಬೇಕಲ್ಲ.
ಶೇಖರ್ ಕಪೂರ್ ನಿರ್ದೇಶಿಸಿದ ಎರಡನೇ ಚಿತ್ರ ಮಾಸೂಮ್. ಅವು ನನ್ನ ಪಿಯುಸಿ ದಿನಗಳು ಊರಲ್ಲೆಲ್ಲ ಚಿತ್ರದ ಪೋಸ್ಟರು ಹಾಲುಗಲ್ಲದ ಜುಗಲ್ ಹಂಸರಾಜ್ ರಾರಾಜಿಸುತ್ತಿದ್ದ. ಹಾಡು ಬರೆದವರು ಗುಲ್ಜಾರ್ ಆರ್ ಡಿ ಸಂಗೀತ ಒಂದೊಂದು ಹಾಡು ಅದ್ಭುತ..ಯಾವ ಹಾಡು ಹೆಸರಿಸಬೇಕು. ಎದೆಗೆ ತಟ್ಟಿದ ಇಂದಿಗೂ ಕಾಡುವ ಹಾಡು "ತುಜ್ ಸೆ ನಾರಾಜ್ ನಹಿ ಜಿಂದಗಿ ಹೈರಾನ್ ಹೂಂ ಮೈ ತೇರೆ ಮಾಸೂಮ್ ಸವಾಲೊಂಸೆ ಪರೇಶಾನ ಹೂಂ ಮೈ...".ನಿಜವೇ ನಾವೆಲ್ಲ
ಅಂದುಕೊಳ್ಳೊಲ್ಲವೇ ಛೆ ಈ ಹಾಳು ಜೀವನ .ಹಾಡೂ ಅದೇ ಹೇಳುತ್ತೆ ಆದರೆ ಹೇಳುವ ಧಾಟಿ ಅದೆಷ್ಟು ಕಲಾತ್ಮಕ.....!
ಕೆಲವರಲ್ಲಿ ಪ್ರತಿಭೆ ಧಂಡಿಯಾಗಿರುತ್ತದೆ ಇಲ್ಲ ವಾದರೆ ಇಂತಹ ಸಾಲು ಹುಟ್ಟಲು ಸಾಧ್ಯವೇ ಇಲ್ಲ..." ಜೀನೆ ಕೆ ಲಿಯೇ ಸೋಚಾಹಿ ನಹಿ ದರ್ದ್ ಸಂಭಾಲನೆ ಹೋಂಗೆ ಮುಸ್ಕುರಾಯೆ ತೋ ಮುಸ್ಕುರಾನೆಕಿ ಕರ್ಜ ಉತಾರನೆ ಹೋಂಗೆ ಮುಸ್ಕುರಾವೂಂ ಕಭಿ ತೊ ಲಗತಾ ಹೈ ಜೈಸೆ ಹೋಟೋಂಪೆ ಕರ್ಜ ರಖಾ ಹೈ..."ಅದೆಂತಹ ಅದ್ಭುತ ಕಲ್ಪನೆ ಎಲ್ಲ ಧರ್ಮಗ್ರಂಥಗಳೂ ಹೇಳತಾವ ಪುಣ್ಯ, ಕರ್ಮ, ನಾಳಿನ ಅನಿಶ್ಚಿತತೆ. ಆದರೆ ಸಾಮಾನ್ಯ ಮನುಷ್ಯ ನೋಡಿ ದಂಗು ಹೊಡೆದಿದ್ದಾನೆ..ಅವನಿಂದು ನಗುತ್ತಿದ್ದಾನೆ, ಖುಷಿಯಾಗಿದ್ದಾನೆ ಆದರೆ ನಾಳೆ ಪರಿಸ್ಥಿತಿ ಬಿಗಡಾಯಿಸಿದಾಗ ತಳಮಳ ಗೊಳ್ಳುತ್ತಾನೆ. ಜೀವನ ಪ್ರಶ್ನೆ ಕೇಳುತ್ತಲೇ ಇದೆ ಉತ್ತರ ಹೇಳಲಾಗುತ್ತಿಲ್ಲ ನಿನ್ನೆ ಮನಃಪೂರ್ತಿ ನಕ್ಕಿದ್ದಕ್ಕೆ ಇಂದು ಬಡ್ಡಿ ಕೀಳುತ್ತಿದೆ ಈಗ ನಕ್ಕರೂ ಅದೊಂದು ನಾಳೆ ತಾ ತೀರಿಸಬೇಕಾಗಿರುವ ಸಾಲ ಎಂಬುದು ಗೊತ್ತಾದಾಗ ನಗಲು ಮನಸ್ಸೆಲ್ಲಿ ಬರುತ್ತದೆ.....?
ಎರಡನೇ ನುಡಿ ಈ ಹಾಲಿನ ಹೈ ಲೈಟ ಅಂತ ಹೇಳಬೇಕು...ಕವಿ ಹೊರಳಿದ್ದಾನೆ ನಗುವುದರ ಬಗ್ಗೆ
ಹೇಳುತ್ತ ಕಣ್ಣೀರಿನ ಬಗ್ಗೆ ಹೇಳುತ್ತಾನೆ... ಸಾಲು ಗಮನಿಸಿ .....
आज अगर भर आइ है
बूंदे बरस जायेगि
कल क्या पता जिनके लिये
आंखे तरस जायेगि
जाने कहां गुम हुवा कहां खॊया
एक आंसू छुपाके रखा था
ಕಣ್ಣೀರು ಎಲ್ಲ ಕಾಲದಲ್ಲು ಸಿಗಲಾರವು ಅಥವ ನಾವು ಅಳಬೇಕೆಂದುಕೊಂಡಾಗ ಅವು ಸುರಿಯಲಾರದೇ ಹೋಗಬಹುದು ಅವನ್ನು ಜತನದಿಂದ ಕಾಯ್ದುಕೋಬೇಕಾಗಿದೆ...ಇದೊಂಥರಾ ವಿಚಿತ್ರ ಕಲ್ಪನ ಹೀಗಾಗಬಹುದೇ ಕವಿ ಉತ್ಪ್ರೇಕ್ಷೆ ಮಾಡತಿದ್ದಾನೆಯೇ ಗೊತ್ತಿಲ್ಲ. ಆದರೆ ಶಬ್ದಗಳು ಸೃಷ್ಟಿಸುವ ಅದ್ಭುತ ಕುಸುರಿಗಾರಿಕೆ ಇದೆ ಅಲ್ಲ ಅದಕ್ಕೆ ಉಘೆ ಉಘೆ ಅನ್ನದೇ ವಿಧಿಯಿಲ್ಲ. ಈ ಗೀತೆ ಗೀಳಾಗಿ ಕಾಡುವುದು ಶಬ್ದಗಳ ಕಲೆಗಾರಿಕೆಯಿಂದ ಮಾತ್ರ. ಚಿತ್ರದ ಸನ್ನಿವೇಶಕ್ಕೆ ಈ ಹಾಡು ಅನುರೂಪ ವಾಗಿತ್ತು ಅಥವಾ ಈ ಹಾಡು ಸನ್ನಿವೇಶ ಮೀರಿ ಎಲ್ಲ ಸಂವೇದನಾಶೀಲ ಮನಸ್ಸುಗಳು ಸದಾ ಗುನುಗಲು ಆಶಿಸುವ ಹಾಡು.... ಮರೆಯದ ಅಥವಾ ಮರೆಯಲು ಸಾಧ್ಯವೇ ಇಲ್ಲದ ಸದಾ ಕಾಡುವ ಈ ಹಾಡು....!
ಈ ಸಾಲು ಗಮನಿಸಿ "ಖಾಲಿ ಹಾಥ ಶಾಮ್ ಆಯಿ ಹೈ ಖಾಲಿ ಹಾಥ ಜಾಯೇಗಿ ..", " ಅಪನಾ ಕಿನಾರಾ ನದಿಯಾಕಿ ಧಾರಾ ಹೈ..", " ಪಾನಿ ಪಾನಿರೆ ನೈನೊಂಮೆ ಭರ್ ಜಾ ನಿಂದೇ ಖಾಲಿ ಕರ್ ಜಾ...".ಮೇಲಿನ ಸಾಲುಗಳಲ್ಲಿ ಕವಿ ತನ್ನ ಪ್ರತಿಭೆ ಪ್ರದರ್ಶಿಸಿದ್ದು ಮಾತ್ರವಲ್ಲ ಬದಲು ಶಬ್ದಗಳ ಬಲೆ ನೇಯ್ದಿದ್ದಾನೆ ಆ ಬಲೆಯಲ್ಲಿ ಬಿದ್ದು ಒದ್ದಾಡುವ ನಾವು ನಿಧಾನವಾಗಿ ಅವನ
ಪ್ರಭಾವ ವಲಯಕ್ಕೆ ಸಿಗುತ್ತೇವೆ ಆ ಕಲೆಗಾರನ ಕುಸುರಿ ಕೆಲಸಕ್ಕೆ ಮಾರು ಹೋಗುತ್ತೇವೆ.... ಮೇಲಿನ ಎಲ್ಲ ಹಾಡು ಬರೆದವರು
ಗುಲ್ಜಾರ್ . ಹಿಂದಿ ಸಿನೆಮಾ ಕಂಡ ಪ್ರತಿಭೆಯ ಖನಿ ಈತ. ಈತ ಬರೀ ಹಾಡು ಸಂಭಾಷಣೆ ಗೆ ಮಾತ್ರ ಸೀಮಿತವಾಗಲಿಲ್ಲ ಬದಲು ತೀರ ಸಂವೇದನೆಯ ಸಿನೇಮಾ ತೆಗೆದ ವಾಹ್ ಎನಿಸಿಕೊಂಡ. ಒಮ್ಮೆ ಕಣ್ಣು ಹಾಯಿಸುವ....."ಪರಿಚಯ್ ","ಕೋಶಿಶ್ ", " ಖುಷಬೂ","ಮಾಚಿಸ್ " ," ಇಜಾಜತ್" ಎಂತೆಂತಹ ಸಿನೇಮಾಗಳು...ನಾನು "ಮೌಸಮ್" ಉಲ್ಲೇಖಿಸುವದನ್ನು ಮರೆತೆ.
ಗುಲ್ಜಾರ್ ಸಂವೇದನಶೀಲ ಕಥೆಗಾರ ಕೂಡ. ನಾನು ಇಲ್ಲಿ ಹೇಳಹೊರಟಿರುವುದು ಒಂದು ಹಾಡಿನ ಬಗ್ಗೆ ಪೀಠಿಕೆ ಉದ್ದ ಅನಿಸಿತೇ ಆದರೆ ಹಾಡಿನ ಸೂಕ್ಷ್ಮತೆ ಅನುಭವಿಸಬೇಕಾದರೆ ಕರ್ತನ ಗುಣಗಾನ ಮಾಡಲೇ ಬೇಕಲ್ಲ.
ಶೇಖರ್ ಕಪೂರ್ ನಿರ್ದೇಶಿಸಿದ ಎರಡನೇ ಚಿತ್ರ ಮಾಸೂಮ್. ಅವು ನನ್ನ ಪಿಯುಸಿ ದಿನಗಳು ಊರಲ್ಲೆಲ್ಲ ಚಿತ್ರದ ಪೋಸ್ಟರು ಹಾಲುಗಲ್ಲದ ಜುಗಲ್ ಹಂಸರಾಜ್ ರಾರಾಜಿಸುತ್ತಿದ್ದ. ಹಾಡು ಬರೆದವರು ಗುಲ್ಜಾರ್ ಆರ್ ಡಿ ಸಂಗೀತ ಒಂದೊಂದು ಹಾಡು ಅದ್ಭುತ..ಯಾವ ಹಾಡು ಹೆಸರಿಸಬೇಕು. ಎದೆಗೆ ತಟ್ಟಿದ ಇಂದಿಗೂ ಕಾಡುವ ಹಾಡು "ತುಜ್ ಸೆ ನಾರಾಜ್ ನಹಿ ಜಿಂದಗಿ ಹೈರಾನ್ ಹೂಂ ಮೈ ತೇರೆ ಮಾಸೂಮ್ ಸವಾಲೊಂಸೆ ಪರೇಶಾನ ಹೂಂ ಮೈ...".ನಿಜವೇ ನಾವೆಲ್ಲ
ಅಂದುಕೊಳ್ಳೊಲ್ಲವೇ ಛೆ ಈ ಹಾಳು ಜೀವನ .ಹಾಡೂ ಅದೇ ಹೇಳುತ್ತೆ ಆದರೆ ಹೇಳುವ ಧಾಟಿ ಅದೆಷ್ಟು ಕಲಾತ್ಮಕ.....!
ಕೆಲವರಲ್ಲಿ ಪ್ರತಿಭೆ ಧಂಡಿಯಾಗಿರುತ್ತದೆ ಇಲ್ಲ ವಾದರೆ ಇಂತಹ ಸಾಲು ಹುಟ್ಟಲು ಸಾಧ್ಯವೇ ಇಲ್ಲ..." ಜೀನೆ ಕೆ ಲಿಯೇ ಸೋಚಾಹಿ ನಹಿ ದರ್ದ್ ಸಂಭಾಲನೆ ಹೋಂಗೆ ಮುಸ್ಕುರಾಯೆ ತೋ ಮುಸ್ಕುರಾನೆಕಿ ಕರ್ಜ ಉತಾರನೆ ಹೋಂಗೆ ಮುಸ್ಕುರಾವೂಂ ಕಭಿ ತೊ ಲಗತಾ ಹೈ ಜೈಸೆ ಹೋಟೋಂಪೆ ಕರ್ಜ ರಖಾ ಹೈ..."ಅದೆಂತಹ ಅದ್ಭುತ ಕಲ್ಪನೆ ಎಲ್ಲ ಧರ್ಮಗ್ರಂಥಗಳೂ ಹೇಳತಾವ ಪುಣ್ಯ, ಕರ್ಮ, ನಾಳಿನ ಅನಿಶ್ಚಿತತೆ. ಆದರೆ ಸಾಮಾನ್ಯ ಮನುಷ್ಯ ನೋಡಿ ದಂಗು ಹೊಡೆದಿದ್ದಾನೆ..ಅವನಿಂದು ನಗುತ್ತಿದ್ದಾನೆ, ಖುಷಿಯಾಗಿದ್ದಾನೆ ಆದರೆ ನಾಳೆ ಪರಿಸ್ಥಿತಿ ಬಿಗಡಾಯಿಸಿದಾಗ ತಳಮಳ ಗೊಳ್ಳುತ್ತಾನೆ. ಜೀವನ ಪ್ರಶ್ನೆ ಕೇಳುತ್ತಲೇ ಇದೆ ಉತ್ತರ ಹೇಳಲಾಗುತ್ತಿಲ್ಲ ನಿನ್ನೆ ಮನಃಪೂರ್ತಿ ನಕ್ಕಿದ್ದಕ್ಕೆ ಇಂದು ಬಡ್ಡಿ ಕೀಳುತ್ತಿದೆ ಈಗ ನಕ್ಕರೂ ಅದೊಂದು ನಾಳೆ ತಾ ತೀರಿಸಬೇಕಾಗಿರುವ ಸಾಲ ಎಂಬುದು ಗೊತ್ತಾದಾಗ ನಗಲು ಮನಸ್ಸೆಲ್ಲಿ ಬರುತ್ತದೆ.....?
ಎರಡನೇ ನುಡಿ ಈ ಹಾಲಿನ ಹೈ ಲೈಟ ಅಂತ ಹೇಳಬೇಕು...ಕವಿ ಹೊರಳಿದ್ದಾನೆ ನಗುವುದರ ಬಗ್ಗೆ
ಹೇಳುತ್ತ ಕಣ್ಣೀರಿನ ಬಗ್ಗೆ ಹೇಳುತ್ತಾನೆ... ಸಾಲು ಗಮನಿಸಿ .....
आज अगर भर आइ है
बूंदे बरस जायेगि
कल क्या पता जिनके लिये
आंखे तरस जायेगि
जाने कहां गुम हुवा कहां खॊया
एक आंसू छुपाके रखा था
ಕಣ್ಣೀರು ಎಲ್ಲ ಕಾಲದಲ್ಲು ಸಿಗಲಾರವು ಅಥವ ನಾವು ಅಳಬೇಕೆಂದುಕೊಂಡಾಗ ಅವು ಸುರಿಯಲಾರದೇ ಹೋಗಬಹುದು ಅವನ್ನು ಜತನದಿಂದ ಕಾಯ್ದುಕೋಬೇಕಾಗಿದೆ...ಇದೊಂಥರಾ ವಿಚಿತ್ರ ಕಲ್ಪನ ಹೀಗಾಗಬಹುದೇ ಕವಿ ಉತ್ಪ್ರೇಕ್ಷೆ ಮಾಡತಿದ್ದಾನೆಯೇ ಗೊತ್ತಿಲ್ಲ. ಆದರೆ ಶಬ್ದಗಳು ಸೃಷ್ಟಿಸುವ ಅದ್ಭುತ ಕುಸುರಿಗಾರಿಕೆ ಇದೆ ಅಲ್ಲ ಅದಕ್ಕೆ ಉಘೆ ಉಘೆ ಅನ್ನದೇ ವಿಧಿಯಿಲ್ಲ. ಈ ಗೀತೆ ಗೀಳಾಗಿ ಕಾಡುವುದು ಶಬ್ದಗಳ ಕಲೆಗಾರಿಕೆಯಿಂದ ಮಾತ್ರ. ಚಿತ್ರದ ಸನ್ನಿವೇಶಕ್ಕೆ ಈ ಹಾಡು ಅನುರೂಪ ವಾಗಿತ್ತು ಅಥವಾ ಈ ಹಾಡು ಸನ್ನಿವೇಶ ಮೀರಿ ಎಲ್ಲ ಸಂವೇದನಾಶೀಲ ಮನಸ್ಸುಗಳು ಸದಾ ಗುನುಗಲು ಆಶಿಸುವ ಹಾಡು.... ಮರೆಯದ ಅಥವಾ ಮರೆಯಲು ಸಾಧ್ಯವೇ ಇಲ್ಲದ ಸದಾ ಕಾಡುವ ಈ ಹಾಡು....!
Saturday, July 4, 2009
ಎರಡು ಘಟನೆಗಳು ..
ಕಳೆದ ವಾರದಲ್ಲಿ ನಡೆದ ಎರಡು ಘಟನೆಗಳು ತಲೆ ಕೆಡಿಸಿವೆ..ಎರಡೂ ರಾಜಕಾರಣಕ್ಕೆ ಸಂಬಂಧಿಸಿದ್ದು ಹಾಗೂ
ಕಾರಣಕರ್ತರು ಇಬ್ಬರೂ ದಲಿತ ಹಿನ್ನೆಲೆ ಉಳ್ಳವರು....ಮೀಸಲಾತಿ ಇಬ್ಬರಿಗೂ ಭಾರಿ ಲಾಭ ತಂದುಕೊಟ್ಟಿದೆ .ಆದರೆ ಅದರ ಲಾಭ
ಇವರು ದುರುಪಯೋಗ ಮಾಡಿಕೊಂಡಿದ್ದಾರೆ ಅಂತ ಹೇಳಬೇಕು .
ಮೊದಲ ಘಟನೆ ಅಂದರೆ ಮೆಹಬೂಬ್ ನಗರದಲ್ಲಿ ಎಂಪಿ ಯೊಬ್ಬ ಗ್ರಾಮೀಣ ಬ್ಯಾಂಕಿನ ಮೆನೇಜರ್ ಕೆನ್ನೆಗೆ ಬಾರಿಸಿದ್ದು ಅದು ಎಲ್ಲ
ಚಾನಲ್ ನಲ್ಲಿ ಪ್ರಸಾರವಾಯಿತು. ಚಾನಲನವರ ನೇರ ಪ್ರಶ್ನೆಗಳಿಗೆ ಬೆದರಿದ ಎಂಪಿ ತಾನು ದಲಿತನಾಗಿದ್ದು ತನ್ನಮೇಲೆ ಅಪವಾದ
ಹೊರಿಸಲಾಗುತ್ತಿದೆ ಎಂದು ಹಲಬಿದ.ಒಂಥರಾ ಮುಖವಾಡ ಬೇಕಾಗಿತ್ತು ಅವನಿಗೆ ತಾ ಮಾಡಿದ ಭಾನಗಡಿ ಬಯಲಾದುದು ಅವನಿಗೆ
ಸಹಜವಾಗಿ ಸರಿ ಬಂದಿರಲಿಲ್ಲ .ಅದಕ್ಕೆಂದೇ ತಾ ದಲಿತ ಶೋಷಿತ ಹೀಗೆ ಅವನ ಪ್ರಲಾಪ ಸಾಗಿತ್ತು. ಆತ ಆರಿಸಿಬಂದಿದ್ದು ಮೀಸಲು
ಕ್ಷೇತ್ರದಿಂದ. ದಲಿತರು ಮಾತ್ರವಲ್ಲ ಬೇರೆ ಜನರೂ ಓಟು ಹಾಕಿದ್ದಾರೆ ಮೊನ್ನೆ ತಾನೇ ಪವಿತ್ರ ಸಂಸತ್ತಿನಲ್ಲಿ ಅವನಿಗೆ ಪ್ರವೇಶ ಸಿಕ್ಕಿದೆ
ಎಲ್ಲ ಸಾಧ್ಯ ಆಗಿದ್ದು ಅವನೊಬ್ಬ ದಲಿತಅನ್ನುವ ಏಕೈಕ ಕಾರಣಕ್ಕೆ. ಮೀಸಲಾತಿ ಅವನಿಗೆ ಲಾಭ ತಂದಿದೆ ಅಧಿಕಾರದ ರುಚಿ ಕೊಟ್ಟಿದೆ ಈ ಅಧಿಕಾರ ಆತ ಆರಿಸಿಕಳಿಸಿದ ಜನರ ಹಿತಕ್ಕಾಗಿ ಬಳಸಿಕೊಳ್ಳಬೇಕಾಗಿತ್ತು...ಆದರೆ ಹಾಗಾಗಿಲ್ಲ.
ಎರಡನೆ ಘಟನೆ ಸ್ವಲ್ಪ ಅತಿರೇಕತನದ ಉದಾಹರಣೆ...ಅಂದರೆ ಮಾಯಾವತಿ ಕೇವಲ ೧೨೦೦ ಕೋಟಿ ಖರ್ಚು ಮಾಡಿ ತನ್ನ, ಕಾಂಶಿರಾಮ್, ಅಂಬೇಡ್ಕರ್ ರ ಪ್ರತಿಮೆಗಳನ್ನು ಸ್ಥಾಪಿಸಿದ್ದು ಕೋರ್ಟು ವಿರುದ್ಧ ಆದೀತು ಎಂದು ತರಾತುರಿಯಲ್ಲಿ ಪ್ರತಿಮೆ ಅನಾವರಣ ಸಹ ಮಾಡಲಾಯಿತು.ಮಾಯಾವತಿ ಉತ್ತರ ಪ್ರದೇಶದಲ್ಲಿ ಕಳೆದ ಅಸೆಂಬ್ಲಿ ಚುನಾವಣೆ ಗೆದ್ದಾಗ ಈ ರೀತಿಯದೇನಾದರೂ ನಡೆದೀತು ಎಂದು ಆರಿಸಿ ಕಳಿಸಿದ ಮತದಾರ ಖಂಡಿತವಾಗಿ ಅಂದುಕೊಂಡಿರಲಿಕ್ಕಿಲ್ಲ.... ಜನ ಕಟ್ಟಿದ
ತೆರಿಗೆ ಹಣ ಈ ರೀತಿ ಪೋಲಾಗುತ್ತದೆ ಇದು ನೋಡಿದರೆ ಎಂಥವರಿಗೂ ನೋವಾಗುತ್ತದೆ. ಇಷ್ಟಕ್ಕೂ ಮಾಯಾವತಿಗೇನು
ಕಾಯಮ್ ಮುಖ್ಯಮಂತ್ರಿ ಸ್ಥಾನಇದೆಯೇ ಮುಂದಿನ ಚುನಾವಣೆಯಲ್ಲಿ ಈಗ ಆರಿಸಿಕಳಿಸಿದ ಮತದಾರ ತಿರುಗಿ ಬೀಳಬಹುದು...
ಆಮೇಲೆ ಯಾವ ಪುರುಷಾರ್ಥ ಸಾಧಿಸಿದಂತಾಯಿತು ಅದೇ ಹಣದಿಂದ ಅದೆಷ್ಟು ಬರಡು ನೆಲ ನೀರು ನೋಡಬಹುದಾಗಿತ್ತು,
ಹೊಟ್ಟೆಗಳಿಗೆ ಅನ್ನ ಸಿಗಬಹುದಾಗಿತ್ತು ಹಿಂದುಳಿದ ರಾಜ್ಯ ಎಂಬ ಕಪ್ಪು ಚುಕ್ಕೆ ಅಳಿದು ಆ ರಾಜ್ಯವೂ ಉಸಿರಾಡಬಹುದಾಗಿತ್ತು
ಆದರೆ ಆಗಿದ್ದೇ ಬೇರೆ....ಬಹುಷಃ ನಮ್ಮ ದೇಶದ ಸೌಭಾಗ್ಯ ಯಾಕೆಂದರೆ ಜನರ ಒಲವು ಒಂದು ವೇಳೆ ತೃತೀಯರಂಗದ ಕಡೆ
ತಿರುಗಿದ್ದರೆ ಮಾಯಾವತಿ ಪ್ರಧಾನಮಂತ್ರಿ ಯಾಗುತ್ತಿದ್ದಳು ಆಮೇಲೆ ವೃತ್ತ ವೃತ್ತ ಕ್ಕೂ ಅವಳ ಪ್ರತಿಮೆಯೇ ನೋಡಬೇಕಾಗಿತ್ತು.
ಮೇಲಿನ ಘಟನೆ ಅವಲೋಕಿಸಿದಾಗ ಒಂದು ವಿಷಯ ಮನದಟ್ಟಾಗುತ್ತದೆ ಅದೆಂದರೆ ಮೀಸಲಾತಿ ನಿಜಕ್ಕೂ ಯಶಸ್ವಿಯಾಗಿದೆಯಾ ಅಥವಾ ಅದೊಂದು ರಾಜಕೀಯ ದಾಳ ಆಗಿದೆಯಾ .ಏಕೆಂದರೆ ಬಡವರ ಸ್ಥಿತಿ ಇನ್ನೂ ಬದಲಾಗಿಲ್ಲ
ಮೊನ್ನೆ ಕೇರಿ ಅಂತ ಅನಿಸಿಕೊಳ್ಳುತ್ತಿದ್ದವು ಈಗ ಕಾಲೊನಿ ಅಂತ ನಾಮಾಂಕಿತವಾಗಿವೆ.ಆದರೆ ಈ ಕಾಲನಿಯಲ್ಲಿ ವಾಸಮಾಡುವ ಜನ ಹಾಗೆಯೇ ಇದ್ದಾರೆ...ಸರಕಾರ ಮೀಸಲಾತಿ ಕೊಟ್ಟಿದ್ದು ದಯೆ ಅಲ್ಲ ಅದು ಅವರ ಹಕ್ಕು ಎಂಬುದು ಇವರವಾದ. ನಿಜ ಇದ್ರೂ ಇರಬಹುದು ಆದರೆ ಮೀಸಲಾತಿಯ ದುರುಪಯೋಗನೂ ಆಗಿದೆ ಹಾಗೆಯೇ ಸರಕಾರಿ ಹುದ್ದೆ ಸಂಪಾದಿಸಲು, ಕಾಲೇಜು ,ಡಾಕ್ಟರ್ ಇಂಜಿನೀಯರ್ ಆಗಲು ಅದು ಉಪಯೋಗ ಆಗಿರಬಹುದು. ಆದರೆ ಅಂಬೇಡ್ಕರ್ ಆಶಯ ಬೇರೆಯೇ ಇತ್ತು ಮೀಸಲಾತಿಯಿಂದ ದಲಿತರೂ ಮುಂದೆ ಬರ್ತಾರೆ ಜನ ಉದ್ಧಾರ ಆಗ್ತಾರೆ ಈ ದೇಶ ಸುಧಾರಿಸುತ್ತದೆ ಎಂದು ಅಂಬೇಡ್ಕರ ಕನಸು ಕಟ್ಟಿರಬೇಕು....
ಮಾಯಾವತಿ ಹಾಗೂ ಆ ಎಂಪಿ ಉದಾಹರಣೆಗೆ ತಗೊಂಡರೆ ಅವರ ಕನಸು ಕನಸಾಗಿಯೇ ಉಳಿದಿದೆ ಅಂತ ನನ್ನ ಭಾವನೆ....
ಕಾರಣಕರ್ತರು ಇಬ್ಬರೂ ದಲಿತ ಹಿನ್ನೆಲೆ ಉಳ್ಳವರು....ಮೀಸಲಾತಿ ಇಬ್ಬರಿಗೂ ಭಾರಿ ಲಾಭ ತಂದುಕೊಟ್ಟಿದೆ .ಆದರೆ ಅದರ ಲಾಭ
ಇವರು ದುರುಪಯೋಗ ಮಾಡಿಕೊಂಡಿದ್ದಾರೆ ಅಂತ ಹೇಳಬೇಕು .
ಮೊದಲ ಘಟನೆ ಅಂದರೆ ಮೆಹಬೂಬ್ ನಗರದಲ್ಲಿ ಎಂಪಿ ಯೊಬ್ಬ ಗ್ರಾಮೀಣ ಬ್ಯಾಂಕಿನ ಮೆನೇಜರ್ ಕೆನ್ನೆಗೆ ಬಾರಿಸಿದ್ದು ಅದು ಎಲ್ಲ
ಚಾನಲ್ ನಲ್ಲಿ ಪ್ರಸಾರವಾಯಿತು. ಚಾನಲನವರ ನೇರ ಪ್ರಶ್ನೆಗಳಿಗೆ ಬೆದರಿದ ಎಂಪಿ ತಾನು ದಲಿತನಾಗಿದ್ದು ತನ್ನಮೇಲೆ ಅಪವಾದ
ಹೊರಿಸಲಾಗುತ್ತಿದೆ ಎಂದು ಹಲಬಿದ.ಒಂಥರಾ ಮುಖವಾಡ ಬೇಕಾಗಿತ್ತು ಅವನಿಗೆ ತಾ ಮಾಡಿದ ಭಾನಗಡಿ ಬಯಲಾದುದು ಅವನಿಗೆ
ಸಹಜವಾಗಿ ಸರಿ ಬಂದಿರಲಿಲ್ಲ .ಅದಕ್ಕೆಂದೇ ತಾ ದಲಿತ ಶೋಷಿತ ಹೀಗೆ ಅವನ ಪ್ರಲಾಪ ಸಾಗಿತ್ತು. ಆತ ಆರಿಸಿಬಂದಿದ್ದು ಮೀಸಲು
ಕ್ಷೇತ್ರದಿಂದ. ದಲಿತರು ಮಾತ್ರವಲ್ಲ ಬೇರೆ ಜನರೂ ಓಟು ಹಾಕಿದ್ದಾರೆ ಮೊನ್ನೆ ತಾನೇ ಪವಿತ್ರ ಸಂಸತ್ತಿನಲ್ಲಿ ಅವನಿಗೆ ಪ್ರವೇಶ ಸಿಕ್ಕಿದೆ
ಎಲ್ಲ ಸಾಧ್ಯ ಆಗಿದ್ದು ಅವನೊಬ್ಬ ದಲಿತಅನ್ನುವ ಏಕೈಕ ಕಾರಣಕ್ಕೆ. ಮೀಸಲಾತಿ ಅವನಿಗೆ ಲಾಭ ತಂದಿದೆ ಅಧಿಕಾರದ ರುಚಿ ಕೊಟ್ಟಿದೆ ಈ ಅಧಿಕಾರ ಆತ ಆರಿಸಿಕಳಿಸಿದ ಜನರ ಹಿತಕ್ಕಾಗಿ ಬಳಸಿಕೊಳ್ಳಬೇಕಾಗಿತ್ತು...ಆದರೆ ಹಾಗಾಗಿಲ್ಲ.
ಎರಡನೆ ಘಟನೆ ಸ್ವಲ್ಪ ಅತಿರೇಕತನದ ಉದಾಹರಣೆ...ಅಂದರೆ ಮಾಯಾವತಿ ಕೇವಲ ೧೨೦೦ ಕೋಟಿ ಖರ್ಚು ಮಾಡಿ ತನ್ನ, ಕಾಂಶಿರಾಮ್, ಅಂಬೇಡ್ಕರ್ ರ ಪ್ರತಿಮೆಗಳನ್ನು ಸ್ಥಾಪಿಸಿದ್ದು ಕೋರ್ಟು ವಿರುದ್ಧ ಆದೀತು ಎಂದು ತರಾತುರಿಯಲ್ಲಿ ಪ್ರತಿಮೆ ಅನಾವರಣ ಸಹ ಮಾಡಲಾಯಿತು.ಮಾಯಾವತಿ ಉತ್ತರ ಪ್ರದೇಶದಲ್ಲಿ ಕಳೆದ ಅಸೆಂಬ್ಲಿ ಚುನಾವಣೆ ಗೆದ್ದಾಗ ಈ ರೀತಿಯದೇನಾದರೂ ನಡೆದೀತು ಎಂದು ಆರಿಸಿ ಕಳಿಸಿದ ಮತದಾರ ಖಂಡಿತವಾಗಿ ಅಂದುಕೊಂಡಿರಲಿಕ್ಕಿಲ್ಲ.... ಜನ ಕಟ್ಟಿದ
ತೆರಿಗೆ ಹಣ ಈ ರೀತಿ ಪೋಲಾಗುತ್ತದೆ ಇದು ನೋಡಿದರೆ ಎಂಥವರಿಗೂ ನೋವಾಗುತ್ತದೆ. ಇಷ್ಟಕ್ಕೂ ಮಾಯಾವತಿಗೇನು
ಕಾಯಮ್ ಮುಖ್ಯಮಂತ್ರಿ ಸ್ಥಾನಇದೆಯೇ ಮುಂದಿನ ಚುನಾವಣೆಯಲ್ಲಿ ಈಗ ಆರಿಸಿಕಳಿಸಿದ ಮತದಾರ ತಿರುಗಿ ಬೀಳಬಹುದು...
ಆಮೇಲೆ ಯಾವ ಪುರುಷಾರ್ಥ ಸಾಧಿಸಿದಂತಾಯಿತು ಅದೇ ಹಣದಿಂದ ಅದೆಷ್ಟು ಬರಡು ನೆಲ ನೀರು ನೋಡಬಹುದಾಗಿತ್ತು,
ಹೊಟ್ಟೆಗಳಿಗೆ ಅನ್ನ ಸಿಗಬಹುದಾಗಿತ್ತು ಹಿಂದುಳಿದ ರಾಜ್ಯ ಎಂಬ ಕಪ್ಪು ಚುಕ್ಕೆ ಅಳಿದು ಆ ರಾಜ್ಯವೂ ಉಸಿರಾಡಬಹುದಾಗಿತ್ತು
ಆದರೆ ಆಗಿದ್ದೇ ಬೇರೆ....ಬಹುಷಃ ನಮ್ಮ ದೇಶದ ಸೌಭಾಗ್ಯ ಯಾಕೆಂದರೆ ಜನರ ಒಲವು ಒಂದು ವೇಳೆ ತೃತೀಯರಂಗದ ಕಡೆ
ತಿರುಗಿದ್ದರೆ ಮಾಯಾವತಿ ಪ್ರಧಾನಮಂತ್ರಿ ಯಾಗುತ್ತಿದ್ದಳು ಆಮೇಲೆ ವೃತ್ತ ವೃತ್ತ ಕ್ಕೂ ಅವಳ ಪ್ರತಿಮೆಯೇ ನೋಡಬೇಕಾಗಿತ್ತು.
ಮೇಲಿನ ಘಟನೆ ಅವಲೋಕಿಸಿದಾಗ ಒಂದು ವಿಷಯ ಮನದಟ್ಟಾಗುತ್ತದೆ ಅದೆಂದರೆ ಮೀಸಲಾತಿ ನಿಜಕ್ಕೂ ಯಶಸ್ವಿಯಾಗಿದೆಯಾ ಅಥವಾ ಅದೊಂದು ರಾಜಕೀಯ ದಾಳ ಆಗಿದೆಯಾ .ಏಕೆಂದರೆ ಬಡವರ ಸ್ಥಿತಿ ಇನ್ನೂ ಬದಲಾಗಿಲ್ಲ
ಮೊನ್ನೆ ಕೇರಿ ಅಂತ ಅನಿಸಿಕೊಳ್ಳುತ್ತಿದ್ದವು ಈಗ ಕಾಲೊನಿ ಅಂತ ನಾಮಾಂಕಿತವಾಗಿವೆ.ಆದರೆ ಈ ಕಾಲನಿಯಲ್ಲಿ ವಾಸಮಾಡುವ ಜನ ಹಾಗೆಯೇ ಇದ್ದಾರೆ...ಸರಕಾರ ಮೀಸಲಾತಿ ಕೊಟ್ಟಿದ್ದು ದಯೆ ಅಲ್ಲ ಅದು ಅವರ ಹಕ್ಕು ಎಂಬುದು ಇವರವಾದ. ನಿಜ ಇದ್ರೂ ಇರಬಹುದು ಆದರೆ ಮೀಸಲಾತಿಯ ದುರುಪಯೋಗನೂ ಆಗಿದೆ ಹಾಗೆಯೇ ಸರಕಾರಿ ಹುದ್ದೆ ಸಂಪಾದಿಸಲು, ಕಾಲೇಜು ,ಡಾಕ್ಟರ್ ಇಂಜಿನೀಯರ್ ಆಗಲು ಅದು ಉಪಯೋಗ ಆಗಿರಬಹುದು. ಆದರೆ ಅಂಬೇಡ್ಕರ್ ಆಶಯ ಬೇರೆಯೇ ಇತ್ತು ಮೀಸಲಾತಿಯಿಂದ ದಲಿತರೂ ಮುಂದೆ ಬರ್ತಾರೆ ಜನ ಉದ್ಧಾರ ಆಗ್ತಾರೆ ಈ ದೇಶ ಸುಧಾರಿಸುತ್ತದೆ ಎಂದು ಅಂಬೇಡ್ಕರ ಕನಸು ಕಟ್ಟಿರಬೇಕು....
ಮಾಯಾವತಿ ಹಾಗೂ ಆ ಎಂಪಿ ಉದಾಹರಣೆಗೆ ತಗೊಂಡರೆ ಅವರ ಕನಸು ಕನಸಾಗಿಯೇ ಉಳಿದಿದೆ ಅಂತ ನನ್ನ ಭಾವನೆ....
Subscribe to:
Posts (Atom)